ಕುರಿಯ ಏಳ್ನಾಡುಗುತ್ತು ಮೂಲ ನಾಗ ಸಾನಿಧ್ಯದಲ್ಲಿ ನಾಗರ ಪಂಚಮಿ ಆಚರಣೆ 

0

ಪುತ್ತೂರು: ಕುರಿಯ ಏಳ್ನಾಡುಗುತ್ತು ತರವಾಡು ಕುಟುಂಬದ ಮೂಲನಾಗ ಸಾನಿಧ್ಯ ದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ ಹಾಗೂ ಶ್ರೀ ದುರ್ಗಾ ಪೂಜೆಯು ಅರ್ಚಕ ಸುರೇಶ್ ನಕ್ಷತ್ರಿತ್ತಯ ರವರು ನೆರವೇರಿಸಿಕೊಟ್ಟರು. ಕುರಿಯ ಕುಟುಂಬದ ಯಜಮಾನರಾದ ಸೀತಾರಾಮ ರೈ ಹಾಗೂ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ವಿಧಿವಿಧಾನಗಳನ್ನು ಪೂರ್ಣಿಮಾ ಭರತ್ ಬಲ್ಲಾಳ್ ದಂಪತಿಗಳು ನೆರವೇರಿಸಿ ಆಗಮಿಸಿದ ಎಲ್ಲರನ್ನು ಪ್ರೀತಿಯಿಂದ ಬರಮಾಡಿಕೊಂಡು ಪ್ರಸಾದ ವಿತರಿಸಿದರು.

LEAVE A REPLY

Please enter your comment!
Please enter your name here