ಈಶ್ವರಮಂಗಲ ಮಡ್ಯೂಟ್ಟು ತರವಾಡಿನಲ್ಲಿ ಸನ್ಮಾನ

0

ಪುತ್ತೂರು:ತುಳುನಾಡಿನ ಪ್ರತಿಷ್ಠಿತ ತರವಾಡು ಮನೆಗಳಲ್ಲಿ ಒಂದಾಗಿರುವ ಮಡ್ಯೂಟ್ಟು ತರವಾಡಿನಲ್ಲಿ ಆಟಿ ಅಗೆಲು ಕಾರ್ಯಕ್ರಮದೊಂದಿಗೆ ಸಾಧನೆ ಮಾಡಿದ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಅ11ರಂದು ನಡೆಯಿತು.


ಕುಟುಂಬದ ಹಿರಿಯರಾದ ಪೂವಪ್ಪ ಪೂಜಾರಿ ಸಸ್ಪೆಟಿ ಇವರ ಉಪಸ್ಥಿತಿಯಲ್ಲಿ, ಪ್ರವೀಣ್ ರೈ ಮೇನಾಲ, ಪ್ರದೀಪ್ ರೈ ಮೇನಾಲ ಮತ್ತು ಬೆಲಿಂಜ ರವೀಂದ್ರನಾಥ ಬೆಂಗಳೂರು ಇವರು ಸನ್ಮಾನಿಸಿದರು.


ಸುಮಾರು 24 ವರ್ಷ ಬಿ.ಎಸ್.ಎಫ್ ನಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ತರವಾಡಿನ ಸದಸ್ಯರಾದ ಚಂದ್ರಶೇಖರ್ ಎಂ ಮೆರಡ್ಕ ಮತ್ತು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತರವಾಡಿನ ಸದಸ್ಯರಾದ ಧನಂಜಯ ಪೂಜಾರಿ ಮಡಿಕೇರಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.


2023-24 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವಂಶಿಕಾ ಕಜೆಕಾರು ಕಕ್ಯಪದವು, ರಮ್ಯ ಕೌಡಿಚ್ಚಾರು, ಅಮೂಲ್ಯ ಕೆ.ಎ ದಕ್ಷಿಣ ಬೀರಮಂಗಲ ಸುಳ್ಯ,ಹಾಗು ಅಂತಿಮ ಪದವಿ ಪರೀಕ್ಷೆ ಯಲ್ಲಿ ನಿಶ್ಮಿತಾ ಎ ಅಂಕತಡ್ಕ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here