ರಾಜ್ಯಮಟ್ಟದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಡಾ. ಸೌರಭಾ ಪ್ರಥಮ

0

ಪುತ್ತೂರು: ಚರಕ ಜಯಂತಿ ಪ್ರಯುಕ್ತ ಬಳ್ಳಾರಿಯ ತಾರನಾಥ ಗವರ್ನಮೆಂಟ್ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಆ.8ರಂದು ನಡೆದ ‘ಚರಕಾಮೃತ-2024’ ಇಂಟರ್ ಕಾಲೇಜು ರಾಜ್ಯ ಮಟ್ಟದ ಸ್ಪರ್ಧೆಯ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಡಾ. ಸೌರಭಾ ಜಯರಾಮರವರು ಪ್ರಥಮ ಬಹುಮಾನ ಗಳಿಸಿದ್ದಾರೆ.


ಒಟ್ಟು 54 ಶ್ಲೋಕಗಳನ್ನು 7 ನಿಮಿಷ ಅವಧಿಯಲ್ಲಿ ನಿರರ್ಗಳವಾಗಿ ರಾಗ ಬದ್ಧವಾಗಿ ನಿಯಮಿತ ಅವಧಿಯಲ್ಲಿ ಕಂಠಪಾಠ ಮಾಡಿ ಹೇಳುವ ನಿಯಮದಡಿ ನಡೆದ ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಡಾ. ಸೌರಭಾ ಜಯರಾಮರವರು ಪ್ರಥಮ ಸ್ಥಾನಿಯಾಗಿ ಪ್ರಶಸ್ತಿಗೆ ಭಾಜನರಾದರು.

34ನೇ ನೆಕ್ಕಿಲಾಡಿಯಲ್ಲಿರುವ ಶಾಂತಾ ಸಭಾಭವನದ ಮಾಲಕರಾದ ಸಾಹಿತಿ ಶಾಂತಾ ಕುಂಟಿನಿ ಮತ್ತು ರವಿ ಕುಂಟಿನಿಯವರ ಪುತ್ರಿಯಾಗಿರುವ ಡಾ. ಸೌರಭರವರು ಮಂಗಳೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಜಯರಾಮ ಉಳುವಾನ ಅವರ ಪತ್ನಿಯಾಗಿದ್ದು ಪ್ರಸ್ತುತ ಕೊಪ್ಪಳದ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ 3ನೇ ವರುಷದ ಎಂ.ಡಿ. ಕ್ರಿಯಾ ಶರೀರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here