ಬೆಟ್ಟಂಪಾಡಿ ಹಾ.ಉ.ಸಹಕಾರ ಸಂಘದಿಂದ ಜಂತುಹುಳು ನಿವಾರಣಾ ಮದ್ದು ವಿತರಣೆ

0

ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಜಾನುವಾರುಗಳ ಸಾಮೂಹಿಕ ಜಂತುಹುಳುಗಳ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಆ.14ರಂದು ಹೈನುಗಾರರಿಗೆ ಜಂತುಹುಳು ನಿವಾರಣಾ ಔಷಧ ವಿತರಿಸಲಾಯಿತು. ಎಲ್ಲಾ ಹೈನುಗಾರರು ತಮ್ಮ ಜಾನುವಾರುಗಳಿಗೆ ಜಂತುಹುಳುಗಳ ನಿವಾರಣಾ ಮದ್ದನ್ನು ಕಡ್ಡಾಯವಾಗಿ ನೀಡಬೇಕೆಂದು ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ತಿಳಿಸಿದರು. ಸಂಘದ ಮಾಜಿ ಅಧ್ಯಕ್ಷ ರಂಗನಾಥ ರೈ ಗುತ್ತು, ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ, ನಿರ್ದೇಶಕರುಗಳಾದ ಸೂರ್ಯನಾರಾಯಣ ಭಟ್, ಪ್ರಮೋದ್ ರೈ ಬರೆ, ಹೈನುಗಾರರಾದ ಸಂತೋಷ್ ರೈ ಗುತ್ತು, ಗುರುಪ್ರಸಾದ್ ಹೊಳ್ಳ, ಕರುಣಾಕರ ಪೂಜಾರಿ ಬೆದ್ರಾಡಿ, ಮಹೇಶ್ ಪಾರ, ಅಜಿತ್ ಕುಮಾರ್, ಹರೀಶ್ ಕಲ್ಲಗದ್ದೆ, ಹಾಗೂ ಸಂಘದ ಕೃ.ಗರ್ಭದಾರರಾದ ಉಚಿತ್ ಬದಿನಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here