ಭಕ್ತಕೋಡಿ: 23ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಹಾಗೂ ಶ್ರೀ ಗೌರೀ ಮಹಿಳಾ ಮಂಡಲ ಸರ್ವೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ.26 ರಂದು ನಡೆಯುವ 23ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಭಕ್ತಕೋಡಿ ವರಲಕ್ಷ್ಮೀ ಸಂಕೀರ್ಣದಲ್ಲಿ ನಡೆಯಿತು.

ಯುವಕ ಮಂಡಲದ ಗೌರವ ಸಲಹೆಗಾರರಾದ ಶ್ರೀನಿವಾಸ್ ಎಚ್.ಬಿ. ಹಾಗೂ ಶಶಿಧರ್ ಎಸ್.ಡಿ ಸರ್ವೆದೋಳಗುತ್ತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಪ್ರಧಾನ ಕಾರ್ಯದರ್ಶಿ ಮನೋಜ್ ಸುವರ್ಣ ಸೊರಕೆ, ಖಜಾಂಜಿ ಗುರುರಾಜ್ ಪಟ್ಟೆಮಜಲು, ಉಪಾಧ್ಯಕ್ಷ ಅಶೋಕ್ ಎಸ್.ಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮಣ್ಣ ಭಕ್ತಕೋಡಿ, ಕಮಲೇಶ್ ಎಸ್.ವಿ, ಸುಬ್ರಹ್ಮಣ್ಯ ಕರುಂಬಾರು, ರಾಜೇಶ್ ಎಸ್.ಡಿ, ಎಸ್.ಎಂ. ಶರೀಫ್ ಸರ್ವೆ, ಸುರೇಶ್ ಎಸ್.ಡಿ‌.
ಕೃಷಿ ಮತ್ತು ಪರಿಸರ ಕಾರ್ಯದರ್ಶಿ ನಾಗೇಶ್ ಪಟ್ಟೆಮಜಲು, ಸಂಘಟನಾ ಕಾರ್ಯದರ್ಶಿ ಹರೀಶ್ ಅಲೇಕಿ, ಗೌತಮ್ ಪಟ್ಟೆಮಜಲು ಹಾಗೂ ಅಮರ್‌ರಾಜ್ ಭಕ್ತಕೋಡಿ,
ಸದಸ್ಯರಾದ ಲಕ್ಷ್ಮಣ ಆಚಾರ್ಯ, ವಸಂತ್ ಪೂಜಾರಿ ಕೈಪಂಗಲದೋಳ, ಮಧು ಸುವರ್ಣ,ಕೃಷ್ಣಪ್ಪ ಪಟ್ಟೆಮಜಲು, ವರ್ಷಿತ್ ಕೈಪಂಗಲದೋಳ,
ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ಕುಶಾಲ ನಾಗೇಶ್, ಗ್ರಾಮಸ್ಥರಾದ ಗುಡ್ಡಪ್ಪ ಗೌಡ ಭಕ್ತಕೋಡಿ, ಉಮೇಶ್ ಸರ್ವೆದೋಳಗುತ್ತು, ಲತೀಫ್ ಭಕ್ತಕೋಡಿ, ಹಂಝ ಕೂಡುರಸ್ತೆ, ಶಾಫಿ ಸೊರಕೆ, ಶರೀಫ್, ಬೆಳಿಯಪ್ಪ ಕಡ್ಯ ಹಾಗೂ ಇನ್ನಿತರು ಉಪಸ್ಥಿರಿದ್ದರು.

ಯುವಕ‌ ಮಂಡಲದ ಅಧ್ಯಕ್ಷ ಗೌತಮ್‌‌ರಾಜ್ ಕರುಂಬಾರು ಮಾತನಾಡಿ ನಮ್ಮ ಯುವಕ ಮಂಡಲದ ವತಿಯಿಂದ ಆ.26 ರಂದು 23ನೇ ವರ್ಷದ‌‌ ಮೊಸರು ಕುಡಿಕೆ ಉತ್ಸವ ಭಕ್ತಕೋಡಿಯಲ್ಲಿ ವಿವಿಧ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದ್ದು ಈ ಬಾರಿಯೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲು ಸಂಘಟಿತರಾಗಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here