ಎಡಮಂಗಲ: ಕುಸಿತಗೊಂಡ ಸೇತುವೆ – ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಣೆ

0

ಕಾಣಿಯೂರು: ಎಡಮಂಗಲ ಗ್ರಾಮದಲ್ಲಿ ವಿವಿಧ ಕಡೆಗಳಲ್ಲಿ ಮಳೆಯಿಂದ ಹಾನಿಯಾಗಿರುವ ಸ್ಥಳಗಳಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿಯಾಗಿ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಹಾಗೂ ಪಂಚಾಯತ್‌ ಸಿಬ್ಬಂಧಿ ಉಪಸ್ಥಿತರಿದ್ದರು. ನಿಂತಿಕಲ್ಲು ಎಡಮಂಗಲ-ಪುಳಿಕುಕ್ಕು ಸಂಪರ್ಕ ಲೋಕೋಪಯೋಗಿ ರಸ್ತೆಯ ಕಡಬ ತಾಲೂಕಿನ ಎಡಮಂಗಲ ಸಮೀಪದ ಮಾಲೆಂಗಿರಿ ಎಂಬಲ್ಲಿ ಸೇತುವೆ ಅಡಿ ಭಾಗ ಮಂಗಳವಾರ ರಾತ್ರಿಯ ಭಾರೀ ಮಳೆಗೆ ಕುಸಿದಿದ್ದು, ಪರಿಣಾಮ ಸೇತುವೆ ಸಂಚಾರಕ್ಕೆ ಯೋಗ್ಯವಲ್ಲದ ಹಿನ್ನಲೆಯಲ್ಲಿ ಈ ರಸ್ತೆಯಲ್ಲಿ ಸಂಚರ ನಿರ್ಬಂಧಿಸಲಾಗಿತ್ತು.

LEAVE A REPLY

Please enter your comment!
Please enter your name here