ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ವರಮಹಾಲಕ್ಷ್ಮೀ ಪೂಜೆ

0

ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಇದರ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಪಡುಮಲೆ ಇದರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಅ.16ರಂದು  ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸುಳ್ಯ ಅಂಜನಾದ್ರಿ ಪುರೋಹಿತ್  ಶ್ರೀ ನಾಗರಾಜ ಭಟ್, ನೇತೃತ್ವದಲ್ಲಿ ನಡೆಯಿತು.

ಅ.16 ಪೂರ್ವಾಹ್ನ ಗಂಟೆ 8-30ರಿಂದ  ಪುಜಾ ಅರಂಭ ಮಧ್ಯಾಹ್ನ 12 30ಕ್ಕೆ ದೇವಾಲಯದಲ್ಲಿ ಶ್ರೀ ದೇವರ ಪೂಜೆ, ನಡೆದು ಬಳಿಕ  ಶ್ರೀ ವರಮಹಾಲಕ್ಷ್ಮೀ ಪೂಜಾ ಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಪೂಜಾ ಸಮಿತಿ ಗೌರವಾಧ್ಯಕೆ ಸುಧಾ ಎಸ್ ರೈ ಕಟ್ಟಾವು, ಅಧ್ಯಕ್ಷೆ ಸವಿತಾ ಗೆಜ್ಜೆಗಿರಿ, ಕಾರ್ಯದರ್ಶಿ ಶಂಕರಿ ಪಟ್ಟೆ, ಜತೆ ಕಾರ್ಯದರ್ಶಿ ಸುಲೋಚನ ಎಸ್ ನಾಯ್ಕ ನೇರ್ಲಪ್ಪಾಡಿ, ಉಪಾಧ್ಯಕ್ಷೆ ಸುನೀತಾ ಎಸ್ ರೈ ಮೇಗಿನಮನೆ, ಕೋಶಾಧಿಕಾರಿ ಶ್ರೀಮತಿ ಕನ್ನಡ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸತೀಶ್ ರೈ ಕಟ್ಟಾವು, ಅಧ್ಯಕ್ಷ ಜನಾರ್ದನ ಪದಡ್ಕ, ಕಾರ್ಯದರ್ಶಿ ಸುರೇಶ್ ರೈ ಪಳ್ಳತ್ತಾರು, ಕೋಶಾಧಿಕಾರಿ ರಾಜೇಶ್ ಮೇಗಿನಮನೆ, ಉಪಾಧ್ಯಕ್ಷ ಗಂಗಾಧರ ಮೇಗಿನಮನೆ  ಹಾಗೂ  ವ್ಯವಸ್ಥಾಪನಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು  ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪೂಜಾ ಕಾರ್ಯಕ್ರಮದಲ್ಲಿ  ಸುಮಾರು 600 ಪೂಜೆ  ಸೇವೆ ನಡೆದಿದ್ದು ಸುಮಾರು 2 ಸಾವಿರಕ್ಕೂ ಮಿಕ್ಕಿ ಅನ್ನ ಪ್ರಸಾದ ಸ್ವೀಕರಿಸಿದರು.

ಶ್ರೀ ಕೊವೆ ಶಾಸ್ತಾರ ವಿಷ್ಣುಮೂರ್ತಿ ಸಾಂಸ್ಕೃತಿಕ ಸೇವಾ ಸಮಿತಿ ಪಡುಮಲೆ, ಶ್ರೀ ವರಮಹಾಲಕ್ಷ್ಮೀ ಮಹಿಳಾ ಭಜನಾ ಸಂಘ ಪಡುಮಲೆ, ಸರ್ವಶಕ್ತಿ  ಮಹಿಳಾ ಭಜನಾ ಮಂಡಳಿ ಪಡುಮಲೆ, ಅಧಿ ಶಕ್ಕಿ ಮಹಿಳಾ ಭಜನಾ ಮಂಡಳಿ ಪಟ್ಟೆ ಹಾಗೂ ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಸಂಘ ಸುಳ್ಯಪದವು ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು..

LEAVE A REPLY

Please enter your comment!
Please enter your name here