ಮಹೇಶ್ವರ ಪೆಟ್ರೋಲ್ ಪಂಪ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು : ಇಲ್ಲಿನ ತೆಂಕಿಲ ಬೈಪಾಸ್ ಬಳಿ ಇರುವ ಮಹೇಶ್ವರ ಪೆಟ್ರೋಲಿಯಂ (MRPL) ನಲ್ಲಿ 78 ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹೇಶ್ವರ ಪೆಟ್ರೋಲಿಯಂ ಹಾಗೂ ಪ್ರಸಾದ್ ಇಂಡಸ್ಟ್ರೀಸ್ ನ ಮಾಲಕರಾದ ಶಿವಪ್ರಸಾದ್ ಶೆಟ್ಟಿ ಯವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಭಾಕರ ಶೆಟ್ಟಿ ಸ್ವೀಕಾರ್ ಸ್ವೀಟ್ಸ್, ಶಿವರಾಮ ರೈ, ವಿನ್ಸೆಂಟ್ ಮಸ್ಕರೇನಸ್, ಅವಿನಾಶ್ ರೈ, ವಿಕಾಸ ರೈ ಪಡೀಲು ಉಪಸ್ಥಿತರಿದ್ದರು. ನಿವೃತ್ತ ಸೈನಿಕ ಸುಬೇದಾರ್ ಮೇಜರ್, ಚಂದ್ರಶೇಖರ ಗೌಡ ಗುಂಡೋಲೆ, ಇವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಂಡರು. ಭವಿಷ್ ಎಸ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here