ಸೈಂಟ್ ಮಿಲಾಗ್ರಿಸ್ ಸೌಹಾರ್ದ ಸಂಸ್ಥೆಯಿಂದ ಭಾರತ ಸೇವಾಶ್ರಮ ನಿವಾಸಿಗಳಿಗೆ ಕಿಟ್ ವಿತರಣೆ

0

ಪುತ್ತೂರು: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆ.17ರಂದು ಕಾರವಾರ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್‌ನ ವಿಟ್ಲ ಶಾಖೆ ವತಿಯಿಂದ ಭಾರತ ಸೇವಾಶ್ರಮ ನಿವಾಸಿಗಳಿಗೆ ಕಿಟ್ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ದೇಲಂತ ಬೆಟ್ಟು ಚರ್ಚ್‌ನ ಧರ್ಮಗುರು ಸುನಿಲ್ ಪ್ರವೀಣ್ ಪಿಂಟೋ, ನಿವೃತ್ತ ಶಿಕ್ಷಕಿ ಜುಲಿಯಾನ ಲೋಬೋ, ಉದ್ಯಮಿ ಸದಾನಂದ ಶೆಣೈ, ಸಾಲ ವಸೂಲಾತಿ ಅಧಿಕಾರಿ ಮಹೇಶ್ ಪ್ರಸಾದ್ ಲೆಕ್ಕ ಪರಿಶೋಧಕರಾದ ಗಣೇಶ ಹಾಗೂ ಪ್ರದೀಪ ಹಾಗೂ ಶಾಖಾ ವ್ಯವಸ್ಥಾಪಕಾರದ ಸರ್ವಜಿತ್ ಶೆಟ್ಟಿ, ಶಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಹಕಾರಿಯು 20 ವರ್ಷವನ್ನು ಯಶಸ್ವಿಯಾಗಿ ಮುಗಿಸಿ 111 ಶಾಖೆಗಳನ್ನು ಹೊಂದಿದ್ದು ಪ್ರತಿ ವರ್ಷ 3000 ಫಲಾನುಭವಿಗಳಿಗೆ ಸಹಾಯ ಹಸ್ತ ನೀಡುತ್ತಿದೆ. ಅದೇ ರೀತಿ ಕನ್ಯಾನದಲ್ಲಿನ ಭಾರತ ಸೇವಾಶ್ರಮದ 225 ಜನ ಫಲಾನುಭವಿಗೆ ಕಿಟ್ ವಿತರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

LEAVE A REPLY

Please enter your comment!
Please enter your name here