ಪಾಲ್ತಾಡಿ : ಕೋಲ್ಕತಾದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಮೊಂಬತ್ತಿ ಹಿಡಿದು, ಪ್ರತಿಭಟನೆ

0

ಸವಣೂರು : ಕೋಲ್ಕತಾದ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಸೋಮವಾರ ರಾತ್ರಿ ಪಾಲ್ತಾಡಿ ಗ್ರಾಮದ ಬಂಬಿಲದಲ್ಲಿ ಪಾಲ್ತಾಡಿ ಬಿಜೆಪಿ ಬೂತ್ 70ರ ವತಿಯಿಂದ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮಾತನಾಡಿ, ಇಂತಹ ಶೋಷಣೆ ವಿರುದ್ಧ ಪ್ರತೀ ಗ್ರಾಮದ ಮೂಲೆ ಮೂಲೆಯಲ್ಲೂ ಪ್ರತಿಭಟನೆ ನಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರವಿ ಕುಮಾರ್ ಬಿ.ಎಂ., ಬಿಜೆಪಿ ಬೂತ್ 70ರ ಅಧ್ಯಕ್ಷ, ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಸದಸ್ಯರಾದ ಸುರೇಶ್ ದೋಳ,ರಾಮ ಬಿ.,ವಸಂತ,ದೀಕ್ಷಿತ್ ,ಪ್ರೀತಮ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here