ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ವತಿಯಿಂದ ಆ.20ರಂದು ಸರಕಾರಿ ಪ್ರಾಥಮಿಕ ಶಾಲೆ ಹಿರೇಬಂಡಾಡಿ ಇಲ್ಲಿ ನಡೆದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ14ರ ವಯೋಮಾನದ ಬಾಲಕ ಹಾಗೂ 17 ರ ವಯೋಮಾನದ ಬಾಲಕರ ವಿಭಾಗವು ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅದ್ವೈತ್ ಎ.ಕೆ, ವಂಶಿ, ಸಹನ್ ಕೆ.ಎಸ್, ವಂಶ್ ವೈ ಶೆಟ್ಟಿ, ಅನ್ಶುಲ್ ಶೆಟ್ಟಿ, ಶಿಶಿರ್ ಜೆ ಸಾಲಿಯಾನ್, ಕೆ. ಅತುಲ್ ನಾಯಕ್, ವಚನ್ ಕನ್ಯಾನ, ನಿಶಾದ್ ಸುಲೈಮಾನ್ ಕೆ, ಮೊಹಮ್ಮದ್ ಇರಾಝ್, ಪ್ರಣಿತ್ ರವಿ, ಮಹಮ್ಮದ್ ನಶಾ, ಧನ್ವಿತ್ ಶೆಟ್ಟಿ, ಜೀವಿತ್, ಹೇಮಂತ್ ಪಿ.ಎಂ. ಹಾಗೂ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ಆಕಾಶ್, ಪುನೀತ್ ಕುಮಾರ್ ಬಿ, ಅಹ್ಮದ್ ಶಬೀರ್ ಯು. ಪಿ, ಅಕ್ಷಜ್ ಶೆಟ್ಟಿ, ತನ್ವಿತ್ ಕೆ., ಚಿಂತನ್ ಕೆ.ಸಿ, ಅಕ್ಷಯ್ ಕೆ.ಎಸ್, ಆಯುಶ್ ಶೆಟ್ಟಿ, ಕವೀಶ್ ಬಿ.ಕೆ, ಸಮೃದ್ಧ್ ಜೈನ್, ಪ್ರೀತಮ್ ನಾಯಕ್ ಭಾಗವಹಿಸಿರುತ್ತಾರೆ. ಈ ಪಂದ್ಯಾಟದಲ್ಲಿ 10ನೇ ತರಗತಿಯ ಅಹ್ಮದ್ ಶಬೀರ್ ಯು. ಪಿ, ಹಾಗೂ 7ನೇ ತರಗತಿಯ ಮೊಹಮ್ಮದ್ ಇರಾಝ್ ಉತ್ತಮ ಹೊಡೆತಗಾರರಾಗಿ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯರಾದ ವಿದ್ಯಾ, ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here