ಹಿರೆಬಂಡಾಡಿ: ದ್ವಿಚಕ್ರ ವಾಹನಗಳ ಡಿಕ್ಕಿ-ಸವಾರರಿಗೆ ಗಾಯ

0

ಉಪ್ಪಿನಂಗಡಿ: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡ ಘಟನೆ ಆ.20ರಂದು ಬೆಳಿಗ್ಗೆ ಹಿರೆಬಂಡಾಡಿ-ನೆಹರುತೋಟ ರಸ್ತೆಯ ಪಡೀಲು ಕ್ರಾಸ್‌ನಲ್ಲಿ ನಡೆದಿದೆ.
ಹಿರೆಬಂಡಾಡಿ ಹೆನ್ನಾಳ ನಿವಾಸಿ ಯೋಗೀಶ ಎಂಬವರು ಅವರ ಬೈಕ್(ಕೆಎ 21, ಆರ್ 3743)ನಲ್ಲಿ ಹಿರೇಬಂಡಾಡಿ-ನೆಹರೂ ತೋಟ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ನೆಹರೂತೋಟ ಕಡೆಗೆ ಶಿವರಾಜ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್(ಕೆಎ 21, ಡಬ್ಲ್ಯೂ 26೦9)ನಡುವೆ ಪಡೀಲು ಕ್ರಾಸ್‌ನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದ್ವಿ ಚಕ್ರ ವಾಹನ ಸವಾರರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರ ಶಿವರಾಜ್‌ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಬೈಕ್ ಸವಾರ ಯೋಗೀಶ ಅವರ ಮುಖ, ಬಲ ಕಾಲಿನ ಪಾದ, ಮಣಿಗಂಟಿಗೆ ಗಾಯವಾಗಿದ್ದು ಅವರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗಾಯಾಳು ಯೋಗೀಶ ಅವರ ಸಹೋದರ ಚಂದ್ರಶೇಖರ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here