ಸೇಕೆಹಿತ್ಲು ಕೊರಗಜ್ಜ ಸಾನಿಧ್ಯದಲ್ಲಿ ಹರಕೆಯ ನೇಮೋತ್ಸವ

0

ವಿಟ್ಲ: ಸೇಕೆಹಿತ್ಲು ಕೊರಗಜ್ಜ ಸಾನಿಧ್ಯದಲ್ಲಿ ಯುವಕಾಂಗ್ರೆಸ್ ರಾಜ್ಯ ನಾಯಕಿ, ಬೆಂಗಳೂರು ಮೂಲದ ದಿವ್ಯಾ ಆರ್.ಕೆ.ರವರ ಹರಕೆಯ ಕೊರಗಜ್ಜನ ನೇಮೋತ್ಸವವು ಆ.23ರಂದು ರಾತ್ರಿ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಆರಾಧಕರಾದ ರಾಮ ಕಬಕ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ., ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮೋಹನ್ ಗುರ್ಜಿ‌ನಡ್ಕ, ಕುಳ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಅಳಕೆಮಜಲು, ಅಕ್ರಮ-ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಎಲ್ಯಣ್ಣ ಪೂಜಾರಿ ಮೈರುಂಡ, ಯುವ ಕಾಂಗ್ರೆಸ್ ರಾಜ್ಯ ನಾಯಕಿ, ಬೆಂಗಳೂರು ಮೂಲದ ದಿವ್ಯಾ ಆರ್.ಕೆ. ಹಾಗೂ ಮನೆಯವರು ಸೇರಿದಂತೆ ನೂರಾರು ಭಕ್ತಾಧಿಗಳು ನೆರೆದಿದ್ದರು. ನೋಮೋತ್ಸವದ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here