ಇಂದು ಪರ್ಪುಂಜದಲ್ಲಿ ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ತುಳು ಭಕ್ತಿ ಆಲ್ಬಂ ಸಾಂಗ್ ಬಿಡುಗಡೆ

0

ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇವರ ಸಂಪೂರ್ಣ ಸಹಕಾರದೊಂದಿಗೆ ರಾಜೇಶ್ ರೈ ಪರ್ಪುಂಜ ನಿರ್ಮಾಣದಲ್ಲಿ ಉದಯೋನ್ಮುಖ ಗಾಯಕಿ ಸ್ಮೃತಿ ಪಲ್ಲತ್ತಾರ್ ಕಂಠದಲ್ಲಿ ಮೂಡಿಬಂದಿರುವ ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ಎನ್ನುವ ಪರ್ಪುಂಜ ರಾಮಜಾಲು ಗರಡಿಯ ಬಗ್ಗೆ ಸಾಹಿತ್ಯವಿರುವ ತುಳು ಭಕ್ತಿ ಆಲ್ಬಂ ಸಾಂಗ್ ಆ.26ರಂದು ಸಂಜೆ ಪರ್ಪುಂಜ ರಾಮಜಾಲು ಗರಡಿಯ ವಠಾರದಲ್ಲಿ ಬಿಡುಗಡೆಗೊಳ್ಳಲಿದೆ. ಜಗದೀಶ್ ಪರ್ಪುಂಜರವರ ಜಾಗಸ್360 ಯೂಟ್ಯೂಬ್ ಚಾನೆಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಳಿರುವ ಸಾಂಗ್‌ಗೆ ನವೀನ್ ಕುಮಾರ್ ನಾಕೂರು ಮತ್ತು ಪ್ರವೀಣ್ ಕಕ್ಕೆಬೆಟ್ಟು ಸಾಹಿತ್ಯ ಒದಗಿಸಿದ್ದಾರೆ. ಮಿಥುನ್‌ರಾಜ್ ವಿದ್ಯಾಪುರ ರೇಕಾರ್ಡಿಂಗ್ ಆಂಡ್ ಮಾಸ್ಟರಿಂಗ್, ಕ್ಲಿಕ್ ಡಿಜಿಟಲ್‌ನ ಕಿಶೋರ್ ಕುಂಬ್ರರವರ ಛಾಯಾಗ್ರಹಣವಿದೆ. ಹಾಡು ಕೇಳಿ ಪ್ರೋತ್ಸಾಹಿಸುವಂತೆ ನಿರ್ಮಾಪಕರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here