ಪರ್ಪುಂಜ: ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ಆಲ್ಬಂ ಸಾಂಗ್ ಬಿಡುಗಡೆ

0

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯ ಬಗ್ಗೆ ಸಾಹಿತ್ಯವಿರುವ ರಾಜೇಶ್ ರೈ ಪರ್ಪುಂಜ ನಿರ್ಮಾಣದ ಉದಯೋನ್ಮುಖ ಗಾಯಕಿ ಸ್ಮೃತಿ ಪಲ್ಲತ್ತಾರು ಕಂಠಸಿರಿಯಲ್ಲಿ ಮೂಡಿಬಂದಿರುವ ‘ಅಮರ್ ವೀರೆರ್’ ಕೋಟಿ ಚೆನ್ನಯೆರ್ ಎಂಬ ಭಕ್ತಿ ಆಲ್ಬಂ ಸಾಂಗ್ ಆ.26ರಂದು ಪರ್ಪುಂಜದ ರಾಮಜಾಲು ಗರಡಿಯ ವಠಾರದಲ್ಲಿ ಬಿಡುಗಡೆಗೊಂಡಿತು. ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಠಿಯ ಕಾರ್ಯಕ್ರಮದಲ್ಲಿ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಆಲ್ಬಂ ಸಾಂಗ್ ಅನ್ನು ಜಗದೀಶ್ ಪರ್ಪುಂಜರವರ ಜಾಗಸ್ 360 ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ನಿತೀಶ್ ಕುಮಾರ್ ಶಾಂತಿವನ, ಮಾತೃಶ್ರೀ ಅರ್ಥ್‌ಮೂವರ‍್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ರಾಮಜಾಲು ಕ್ಷೇತ್ರದ ಅರ್ಚಕ ಹರೀಶ್ ಶಾಂತಿ, ಕಾರ್ಪಾಡಿ ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಸ್ನೇಹ ಯುವಕ ಮಂಡಲದ ಗೌರವಾಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳ, ಸ್ನೇಹ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬೇಬಿ ರೈ, ಪತ್ರಕರ್ತ ಸಿಶೇ ಕಜೆಮಾರ್,ಸ್ನೇಹ ಯುವಕ ಮಂಡಲದ ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಪ್ರಮೀಳಾ ಎಸ್, ಕಾರ್ಯದರ್ಶಿ ರೇಖಾ ಎಸ್, ಆಲ್ಬಂ ಸಾಂಗ್‌ನ ನಿರ್ಮಾಪಕ ರಾಜೇಶ್ ರೈ ಪರ್ಪುಂಜ, ಗಾಯಕಿ ಸ್ಮೃತಿ ಪಲ್ಲತ್ತಾರು, ಸಾಹಿತ್ಯ ರಚನೆಕಾರರಾದ ನವೀನ್ ಕುಮಾರ್ ನಾಕೂರು, ಪ್ರವೀಣ್ ಕಕ್ಕೆಬೆಟ್ಟು, ಛಾಯಾಗ್ರಾಹಕ ಕಿಶೋರ್ ಕ್ಲಿಕ್ ಕುಂಬ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಈ ಹಾಡನ್ನು ಜಗದೀಶ್ ಪರ್ಪುಂಜರವರ ಜಾಗಸ್360 ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here