ಲಯನ್ಸ್ ಕ್ಲಬ್ ಪುತ್ತೂರು ವತಿಯಿಂದ ಪ್ರಜ್ಞಾ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ವತಿಯಿಂದ ಪ್ರಜ್ಞಾ ಆಶ್ರಮದಲ್ಲಿ ರಕ್ಷಾ ಬಂಧನ ಆಚರಣೆ ನಡೆಯಿತು. ಲಯನ್ಸ್ ಸದಸ್ಯರು ಪ್ರಜ್ಞಾ ಆಶ್ರಮದ ವಿಶೇಷ ಚೇತನ ಸಹೋದರರಿಗೆ ರಾಖಿಯನ್ನು ಕಟ್ಟಿ, ಅವರೊಂದಿಗೆ ಒಂದಷ್ಟು ಕಾಲ ಬೆರೆತು ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀಕ್ಷಿಸಿ, ಉಪಚರಿಸಿ,ಸಹ ಭೋಜನ ಮಾಡಿದರು. ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಡಿಸಿ ಲಯನ್ ವತ್ಸಲ ರಜನಿಯವರು ಆಶ್ರಮಕ್ಕೆ ಧನ ಸಹಾಯವನ್ನು ನೀಡಿದರು.

ಈ ಮಾದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ಪ್ರೇಮಲತಾ ರಾವ್, ಲಯನ್ ಡಿಸಿ ವತ್ಸಲ ರಜನಿ, ಕಾರ್ಯದರ್ಶಿ ಅರವಿಂದ ಭಗವಾನ್, ಕೋಶಾಧಿಕಾರಿ ಸುಧಾಕರ್ ಕೆ. ಪಿ ,ಲಯನ್ ಜಯಶ್ರೀ ಶೆಟ್ಟಿ ,ಜಯಶ್ರೀ ನಾಯಕ್ ಹಾಗೂ ರಂಗಣ್ಣ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here