ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 20ನೇ ಕಿನ್ನಿಗೋಳಿ ಶಾಖೆ ಉದ್ಘಾಟನೆ

0

ಸಹಕಾರಿ ತತ್ವದಲ್ಲಿ ಬದುಕಿನ ಸಾರ ಅಡಗಿದೆ: ಒಡಿಯೂರು ಶ್ರೀ

ಬೆಳೆಯುತ್ತಿರುವ ಕಿನ್ನಿಗೋಳಿಯ ಮಕುಟಕ್ಕೆ ಮತ್ತೊಂದು ಗರಿ: ಉಮಾನಾಥ ಕೋಟ್ಯಾನ್

ಇದೊಂದು ಪ್ರಗತಿಯ ಪಥದಲ್ಲಿರುವ ಸಂಸ್ಥೆ: ಐಕಳ ಹರೀಶ್ ಶೆಟ್ಟಿ

ವಿಟ್ಲ: ಸಹಕಾರಿ ತತ್ವದಲ್ಲಿ ಬದುಕಿನ ಸಾರ ಅಡಗಿದೆ. ಗ್ರಾಹಕರು ಸಹಕಾರಿ ಸಂಘದ ಜೀವಾಳ, ಗ್ರಾಹಕರೊಂದಿಗಿನ ಸಿಬ್ಬಂದಿಗಳ ನಗುಮೊಗದ ಸೇವೆಯೇ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ. ಪರಿಶ್ರಮ, ಸಾಧನೆ ಇದ್ದಾಗ ಗೌರವ ಅರಸಿಕೊಂಡು ಬರುತ್ತದೆ. ನಿಸ್ವಾರ್ಥ ಸೇವೆಯಿದ್ದಾಗ ಯಶಸ್ಸಿಯ ಹಾದಿ ಸುಗಮವಾಗುತ್ತದೆ. ಧಾರ್ಮಿಕತೆಯ ಜೊತೆಜೊತೆಗೆ ಅರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿ ಸಮಾಜಿಕ ಕಾರ್ಯಗಳಲ್ಲಿ ಕ್ಷೇತ್ರ ತೊಡಗಿ ಕೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಕಿನ್ನಿಗೋಳಿಯ ದುರ್ಗಾದಯಾ ಬಿಲ್ಡಿಂಗ್ ನಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 20ನೇ ಕಿನ್ನಿಗೋಳಿ ಶಾಖೆಯನ್ನು ಉದ್ಘಾಟಿಸಿ ಬಳಿಕ ನಡೆದ ಸಭೆಯಲ್ಲಿ ಆಶೀರ್ವಚನ‌ ನೀಡಿದರು.

ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ರವರು ಮಾತನಾಡಿ ಕಿನ್ನಿಗೋಳಿ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದೆ. ಈ ಸಹಕಾರಿ ಬೆಳೆಯುತ್ತಿರುವ ಕಿನ್ನಿಗೋಳಿಯ ಮಕುಟಕ್ಕೆ ಮತ್ತೊಂದು ಗರಿಯಾಗಿದೆ. ಕಳೆದ ಎರಡು ವರ್ಷದ ಹಿಂದೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ, ಇಲ್ಲಿಗೆ ಗ್ರಾಮೀಣ ಬ್ಯಾಂಕ್ ಅಗತ್ಯವಾಗಿದೆ ಎಂದರು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಇದೊಂದು ಪ್ರಗತಿಯ ಪಥದಲ್ಲಿರುವ ಸಂಸ್ಥೆಯಾಗಿದೆ. ದಿನದಿಂದ ದಿನಕ್ಕೆ ಇದು ಅಭಿವೃದ್ದಿ ಹೊಂದುತ್ತಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಸಾಧ್ವೀ ಶ್ರೀ ಮಾತಾನಂದಮಯೀರವರು ದಿವ್ಯ ಸಾನಿಧ್ಯ ಕರುಣಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಎ. ಸುರೇಶ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಟೀಲು ದೇವಳದ ಪ್ರಧಾನ ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕರಾದ ಭಾರತಿ ಜಿ ಭಟ್, ದುರ್ಗಾದಯ ಕಟ್ಟಡ ಮಾಲಕ ಕೆ ಸೀತಾರಾಮ್ ಶೆಟ್ಟಿ , ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಹೆಗ್ಡೆ, ಶ್ರೀ ಡೆವಲೆಪ್ಪರ್ಸ್ ಮಾಲಕ ಗಿರೀಶ್ ಎಮ್ ಶೆಟ್ಟಿ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶೈಲಾ ಸಿಕ್ವೆರಾ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಇದರ ಜಿಲ್ಲಾ ಸಂಯೋಜಕ ವಿಜಯ.ಬಿ.ಎಸ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕರಾದ ಕಿರಣ್ ಉರ್ವ, ಡಾ.ಕಿಶೋರ್ ಶೆಟ್ಟಿ ದುರ್ಗಾದಯಾ, ಮೂಲ್ಕಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಕಿನ್ನಿಗೋಳಿ, ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಕಿನ್ನಿಗೋಳಿ ಶಾಖಾ ವ್ಯವಸ್ಥಾಪಕರಾದ ಯಶಸ್ವಿನಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು.ಸಂಸ್ಥೆಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ಗಣಪತಿ ಭಟ್ ಸೇರಾಜೆ ವಂದಿಸಿದರು.ಲೋಕೇಶ್ ರೈ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.

ಆ.30: ನಿಂತಿಕಲ್ಲಿನಲ್ಲಿ 21ನೇ ಶಾಖೆ ಉದ್ಘಾಟ‌ನೆ

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆಯು ಆ.30ರಂದು ನಿಂತಿಕಲ್ಲು ಸಾಧನಾ ಸಹಕಾರ ಸೌಧದಲ್ಲಿ ಉದ್ಘಾಟನೆ ಗೊಳ್ಳಲಿದೆ. ಸಂಸ್ಥೆಯನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಮಾತಾನಂದಮಯೀ ರವರು ಉಪಸ್ಥಿತರಿರಲಿದ್ದಾರೆ.

ಸಂಘದ ಅಧ್ಯಕ್ಷರಾದ ಎ. ಸುರೇಶ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕರಾದ ಭಾರತಿ ಜಿ ಭಟ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.

LEAVE A REPLY

Please enter your comment!
Please enter your name here