ದಿ. ಬಾಲಕೃಷ್ಣ ನಾಯ್ಕ್‌ರಿಗೆ ನುಡಿನಮನ

0

ಉಪ್ಪಿನಂಗಡಿ: ನಿಷ್ಠೆ, ಪ್ರಾಮಾಣಿಕ ಬದುಕಿನ ಮೂಲಕ ಅದರ್ಶಪ್ರಾಯವಾಗಿದ್ದ ಬಾಲಕೃಷ್ಣ ನಾಯ್ಕ್ ಅವರು ಇಂದು ನಮ್ಮನ್ನಗಲಿದ್ದರೂ, ಅವರ ನೆನಪು ಮಾತ್ರ ಎಂದಿಗೂ ಶಾಶ್ವತವಾಗಿರುತ್ತದೆ ಎಂದು ಪುತ್ತೂರು ಬಪ್ಪಳಿಗೆಯ ಶ್ರೀ ಶಾರದಾಂಭ ಸೇವಾ ಸಮಾಜ ಸುಧಾರಣ ಸಂಘದ ಅಧ್ಯಕ್ಷ ರಾಜೇಶ ನಾಯ್ಕ್ ತಿಳಿಸಿದರು.


ಇತ್ತೀಚೆಗೆ ನಿಧನರಾದ ಬಾಲಕೃಷ್ಣ ನಾಯ್ಕ್ ಸುಭಾಷ್‌ನಗರ ಅವರ ಉತ್ತರ ಕ್ರಿಯೆಯು ಆ.28ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದ್ದು, ಈ ಸಂದರ್ಭ ನಡೆದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಎನ್. ಉಮೇಶ್ ಶೆಣೈ, ಈಶ್ವರ ನಾಯ್ಕ್ ಸುಭಾಷ್‌ನಗರ, ಶೇಖರ ನಾಯ್ಕ್ ಸುಭಾಷ್‌ನಗರ, ರಮೇಶ್ ನಾಯ್ಕ್ ಸುಭಾಷ್‌ನಗರ, ಮೃತರ ಪತ್ನಿ ಲೀಲಾ, ಪುತ್ರ ದೀಕ್ಷಿತ್, ಭಾವಂದಿರಾದ ಮಧುಕರ, ಮೋನಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here