ಮುಕ್ರಂಪಾಡಿ: ಬಾಲಕಿಯರ ಸ.ಪ.ಪೂ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಆ.27ರಂದು ರಸಾಯನಶಾಸ್ತ್ರ ಉಪನ್ಯಾಸಕ ವಸಂತ್ ಕುಮಾರ್‌ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು. ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು. ವೇದಿಕೆಯಲ್ಲಿ ಕಾಣಿಯೂರು ಭೌತಶಾಸ್ತ್ರ ಉಪನ್ಯಾಸಕಿ ಶಶಿಕಲಾ ಕೆ. ಕಬಕ ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ಸುಧೀರ್, ನಿವೃತ್ತ ಉಪನ್ಯಾಸಕರಾದ ಕೊರಗಪ್ಪ ರೈ, ನಿವೃತ್ತ ಉಪನ್ಯಾಸಕಿ ಜಯಂತಿ, ಚಿತ್ರಲೇಖ ಕೆ ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ಉಪನ್ಯಾಸಕ ವಸಂತ್ ಕುಮಾರ್ ಜಿ ಚಿತ್ರದುರ್ಗದ ಹೊಸದುರ್ಗ ಕಾಲೇಜಿಗೆ ವರ್ಗಾವಣೆಗೊಂಡರು. ಕಾಣಿಯೂರು ಸ.ಪ.ಪೂ ಕಾಲೇಜಿನಿಂದ ವರ್ಗಾವಣೆಗೊಂಡು ಕಾಲೇಜಿಗೆ ಬಂದಿರುವ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಲವೀನ ಲತಾ ಸಾಂತ್ ಮಯೋರ್‌ರವರನ್ನು ಸ್ವಾಗತಿಸಲಾಯಿತು.ಅರ್ಥಶಾಸ್ತ್ರ ಉಪನ್ಯಾಸಕಿ ಶೋಭಾ ಕೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿರ್ಮಲಾ.ಎನ್ ಸ್ವಾಗತಿಸಿದರು. ಉಪನ್ಯಾಸಕ ಅಶೋಕ.ಪಿ. ವಂದಿಸಿದರು. ಉಪನ್ಯಾಸಕರು ಹಾಗೂ ಭೋದಕೇತರ ವೃಂದ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here