ಕಡಬ: ಸ್ಕೂಟಿಗೆ ಡಿಕ್ಕಿಯಾದ ಗೋವು ಚಿಕಿತ್ಸೆ ಫಲಕಾರಿಯಾಗದೆ ಸಾವು

0

ಅಂತ್ಯಸಂಸ್ಕಾರ ನೆರವೇರಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕಡಬ: ರಾತ್ರಿ ವೇಳೆ ಸ್ಕೂಟಿ ಡಿಕ್ಕಿಯಾಗಿ ಗಾಯಗೊಂಡಿದ್ದ ಗೋವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆ.27ರಂದು ನಡೆದಿದೆ.


ಕಡಬ ಪೇಟೆಯಲ್ಲಿ ಸ್ಕೂಟಿಯೊಂದು ಮಾರ್ಗದಲ್ಲಿದ್ದ ಗೋವಿಗೆ ಡಿಕ್ಕಿಯಾಗಿ ಗೋವಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಕಡಬ ಪೋಲಿಸರು, ಸಾರ್ವಜನಿಕರು ಸೇರಿದ್ದು ಕೂಡಲೇ ಕಡಬ ಪಶುವೈದ್ಯಾಧಿಕಾರಿ ಡಾ. ಅಜಿತ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿತ್ತು ಕೂಡಲೇ ಸ್ಪಂಧಿಸಿದ ಡಾ. ಅಜಿತ್ ಅವರು ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿದರು. ಆದರೂ ಗೋವು ಅಸುನೀಗಿತ್ತು. ಬಳಿಕ ರಾತ್ರಿ 12 ಗಂಟೆ ಸುಮಾರಿಗೆ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಕೋಡಿಬೈಲ್ ಅವರ ನೇತೃತ್ವದಲ್ಲಿ ಪ್ರಮೋದ್ ರೈ ನಂದುಗುರಿ, ಯತೀಶ್ ಹೊಸಮನೆ,ನಿತಿನ್ ಎಂಬವರು ಜೆಸಿಬಿ ತರಿಸಿ ಕಡಬ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ಪಶುವೈದ್ಯಾಧಿಕಾರಿ ಯವರ ಸ್ಪಂಧನೆಗೆ ಶ್ಲಾಘನೆ
ರಾತ್ರಿ ವೇಳೆ ಕಡಬ ಪಶುವೈದ್ಯಾಧಿಕಾರಿ ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿ ಬರಬೇಕೆಂದು ವಿನಂತಿಸಿದಾಗ ಕೂಡಲೇ ಸ್ಪಂಧಿಸಿದ ಡಾ. ಸ್ಥಳಕ್ಕೆ ಬಂದು ಸಾಕಷ್ಟು ಪ್ರಯತ್ನ ನಡೆಸಿರುವುದನ್ನು ಹಿಂದೂ ಸಂಘಟನೆಯವರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here