ದರ್ಬೆತ್ತಡ್ಕ: ಶ್ರಮದಾನದ ಮೂಲಕ ಶಾಲಾ ತಡೆಗೋಡೆ ನಿರ್ಮಾಣ

0

ನಿಡ್ಪಳ್ಳಿ: ದರ್ಬೆತ್ತಡ್ಕ, ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಕಳೆದ ಮಳೆಗೆ ಬಿದ್ದ ಕಾರಣ ಆ.24ರಂದು ಶ್ರಮದಾನದ ಮೂಲಕ ಮತ್ತೆ ನಿರ್ಮಿಸಲಾಯಿತು.

ಒಳಮೊಗ್ರು ಗ್ರಾಮ ಪಂಚಾಯಿತ್  ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರಾದ ಶಾರದಾ,  ಪ್ರದೀಪ್ ಎಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶುಭಕರ ನಾಯಕ್ ಡಿ, ಉಪಾಧ್ಯಕ್ಷೆ  ರಾಜೇಶ್ವರಿ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಗೋವಿಂದ ಮೂಲೆ ಹಾಗೂ ಹಿರಿಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಎಸ್.ಡಿ.ಎಂ.ಸಿ ನಿಕಟ ಪೂರ್ವ ಅಧ್ಯಕ್ಷ ವಸಂತ ಮಣಿಯಾಣಿ ಕೊಪ್ಪಳ ಹಾಗೂ ಪೋಷಕರು ಶ್ರಮದಾನದಲ್ಲಿ ಪಾಲ್ಗೊಂಡರು. ತಡೆಗೋಡೆ ನಿರ್ಮಾಣಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷ ಶುಭಕರ ನಾಯಕ್ ಡಿ 2 ಚೀಲ ಸಿಮೆಂಟ್ ಮತ್ತು ಪೋಷಕರು ಮರಳನ್ನು ನೀಡಿ ಕಾಮಗಾರಿಗೆ ಸಹಕರಿಸಿದರು.ನಿರ್ಮಾಣದಲ್ಲಿ ಸಹಕರಿಸಿದ ಸರ್ವರಿಗೂ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here