Puttur ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Shri Mahalingeshwara Temple) ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.31ರಂದು ಪ್ರತಿಷ್ಠಾ ವರ್ಧಂತಿ ವೆ.ಮೂ. ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯತು.

ಬೆಳಿಗ್ಗೆ ಪುಣ್ಯಾಹ, ಗಣಪತಿ ಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ 5ರಿಂದ ಲಲಿತ ಸಹಸ್ರನಾಮ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಮಂಗಳೂರು ಪ್ರಸಾರ ಭಾರತಿ ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದ ಡಾ ಪಿ.ಕೆ. ಗಣೇಶ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಬಳಿಕ ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಫಲಹಾರ ನಡೆಯಿತು.


ಸನ್ಮಾನ: ಈ ಸಂದರ್ಭದಲ್ಲಿ ಸ್ಯಾಕ್ಸೋಫೋನ್ ವಾದಕ ಪಿ.ಕೆ. ಗಣೇಶ್ ಹಾಗೂ ರಾಜ್ಯಮಟ್ಟದ ಕ್ರೀಡಾಪಟು, ಭಜನಾ ಮಂದಿರದ ಸಕ್ರೀಯ ಕಾರ್ಯಕರ್ತ, ಮಂಗಳೂರು ಅಡ್ಯಾರು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ, ಪುತ್ತೂರಿನ ಉರ್ಲಾಂಡಿ ದಿ. ರಾಮಕೃಷ್ಣ (ಕಿರಣ್ ಟೈಲರ್)ರವರ ಮೊಮ್ಮಗ ಪ್ರವೀತ್‌ರವರನ್ನು ಸನ್ಮಾನಿಸಲಾಯಿತು.

ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಗೌರವಾಧ್ಯಕ್ಷ ಉದ್ಯಮಿ, ಸೀತಾರಾಮ ರೈ ಕೆದಂಬಾಡಿಗುತ್ತು, ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಉಪಾಧ್ಯಕ್ಷ ಯಶವಂತ ಆಚಾರ್ಯ, ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿ ತಾರನಾಥ್ ಹೆಚ್, ಸದಸ್ಯರುಗಳಾದ ದೇವಾಲಯಗಳ ಅಧ್ಯಯನಕಾರ ಚಂದ್ರಶೇಖರ ರಾವ್ ಪಿ.ಜಿ., ನಿವೃತ್ತ ಸೇನಾನಿ ರಮೇಶ್ ಬಾಬು, ಫಕೀರ ಗೌಡ, ಶ್ರೀಧರ ಆಚಾರ್ಯ, ಪುಷ್ಪರಾಜ್ ಹೆಗ್ಡೆ, ಜಯಕಿರಣ್ ಉರ್ಲಾಂಡಿ, ಗೋಪಾಲ ಆಚಾರ್ಯ, ಭುಜಂಗ ಆಚಾರ್ಯ, ರಾಜರತ್ನಂ, ದೇವದಾಸ್, ಯೋಗಾನಂದ ರಾವ್, ಕೃಷ್ಣ ಪುತ್ತೂರು, ವಸಂತ್, ಸುದರ್ಶನ್ ಮುರ, ತೇಜಸ್ ನಾಕ್, ಗುಲಾಬಿ ಗೌಡ, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here