ಮಂಜಲ್ಪಡ್ಪು ಬಿಇಎಂ ಶಾಲಾ ನಿವೃತ್ತ ಸಹಶಿಕ್ಷಕಿ ಕುಶಲಾವತಿಯವರಿಗೆ ಬೀಳ್ಕೊಡುಗೆ

0

ಪುತ್ತೂರು: ಮಂಜಲ್ಪಡ್ಪು ಬಿಇಎಂ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಕುಶಲಾವತಿ ವೈ.ಎಸ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಆ.31ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಮಂಗಳೂರು ಬಲ್ಮಟದ ಸಿಎಸ್‌ಐ ಕಚೇರಿಯ ರೈಟ್ ರೆವರೆಂಡ್ ಹೇಮಚಂದ್ರ ಬಿಹೋಪ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಶಶಿಪಾಲ್ ಶೆಟ್ಟಿಯಾನ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಶಾಂತ್ ಮುರ, ನಿವೃತ್ತ ಮುಖ್ಯಗುರು ಮನೋಹರ್ ಕುಮಾರ್, ಸಿಎಸ್‌ಐ ಬೋಡಿಂಗ್‌ನ ನಿವೃತ್ತ ಮೇಲ್ವಿಚಾರಕ ಚಂದ್ರಶೇಖರ ಮೂರ್ತಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂರ್ಣೇಶ್ ಕುಮಾರ್, ಉಪಾಧ್ಯಕ್ಷ ಅನಂತಪದ್ಮನಾಭ, ನಿವೃತ್ತ ಮುಖ್ಯಗುರು ಕೆ.ಪ್ರೇಮ ಕುಮಾರಿ, ಸಹಶಿಕ್ಷಕಿ ಐರಿಸ್ ವಿಕ್ಟೋ, ರಿಯಾ, ಪ್ರವೀಣ ಗ್ರೇಸ್ ಹನ್ಸ್, ಗೌರವ ಶಿಕ್ಷಕಿಯರಾದ ರೂಪಾ, ಕವಿತಾ ಎಸ್‌ಡಿಎಂಸಿ ಸದಸ್ಯರು, ಅಡುಗೆ ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮುಖ್ಯಗುರು ಶಿವಾನಂದಪ್ಪ ಸ್ವಾಗತಿಸಿದರು. ಸಹಶಿಕ್ಷಕಿ ಸಾಂಡ್ರಾ ಪುಷ್ಪಲತಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಅಶ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here