ಮೊಟ್ಟೆತ್ತಡ್ಕ ಮಜಲು ಕ್ಷೇತ್ರದಲ್ಲಿ ಮಾನೆಚ್ಚಿಲ್, ಅಗೇಲು ಸೇವೆ

0

ಪುತ್ತೂರು: ಕಲಿಯುಗ ಕಲೆ, ಕಾರಣಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಸೆ.1ರಂದು ಮಧ್ಯಾಹ್ನ ಮಾನೆಚ್ಚಿಲ್ ಸೇವೆ, ಅಗೇಲು ಸೇವೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.ನೂರಾರು ಭಕ್ತರು ಪಾಲ್ಗೊಂಡಿದ್ದರು.

ಕ್ಷೇತ್ರದಲ್ಲಿ ಅನ್ನಛತ್ರ, ಅಡುಗೆ ಕೋಣೆ ಸಹಿತ ಅಭಿವೃದ್ಧಿ ಕಾರ್ಯಗಳು ಬಾಕಿ ಇರುವುದರಿಂದ ಸೆಪ್ಟೆಂಬರ್ 29ರ ತನಕ ಹಗಲು ಕೋಲ, ಸಂಕ್ರಮಣ ಕೋಲ ಸೇವೆ ನಡೆಯದೆ ಮಾನೆಚ್ಚಿಲ್, ಅಗೇಲು ಸೇವೆ ನಡೆಸಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲು ತೀರ್ಮಾನವಾಗಿತ್ತು.

ಸೆ.29ರ ಬಳಿಕ ಹಗಲು ಕೋಲ, ಸಂಕ್ರಮಣ ಕೋಲ ಸಹಿತ ಕ್ಷೇತ್ರದಲ್ಲಿ ಸೇವೆಗಳು ಎಂದಿನಂತೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ(ಮೊ:9740463437)ತಿಳಿಸಿದ್ದಾರೆ. ಹರಕೆ ಕೋಲ ಬಾಕಿಯಿರುವ ಭಕ್ತಾದಿಗಳು ಸಂಪರ್ಕಿಸುವಂತೆ ಕೋರಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಭಕ್ತಾದಿಗಳು ತನು-ಮನ-ಧನಗಳಿಂದ ಸಹಕರಿಸಬೇಕಾಗಿ ಧರ್ಮದರ್ಶಿ ಮಣಿಸ್ವಾಮಿ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here