ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಾಮೂಹಿಕ ಕುಂಕುಮಾರ್ಚನೆ- ಶಾಸಕಿ ಭಾಗೀರಥಿ ಮುರುಳ್ಯ ಭಾಗಿ

0

ಆಲಂಕಾರು:ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮ,ಸಾಮೂಹಿಕ ಕುಂಕುಮಾರ್ಚನಾ ಕಾರ್ಯಕ್ರಮ, ಷಡಾಧಾರ ಪ್ರತಿಷ್ಠೆ ಮತ್ತು ಶತ ಚಂಡಿಕಾಯಾಗ ಕಾರ್ಯಕ್ರಮ ಸೆ.1 ರಿಂದ ಸೆ.6 ರ ತನಕ ನಡೆಯಲಿದ್ದು ಸೆ.3ರಂದು ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ನೇತೃತ್ವದಲ್ಲಿ ಬೆಳಿಗ್ಗೆ ಸಪ್ತಸತೀ ಪಾರಾಯಣ, ಕಲಶಪೂಜೆ ಸಂಜೆ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಸಾಮೂಹಿಕ ಕುಂಕುಮಾರ್ಚನೆಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡರು. ಸಾಯಂಕಾಲ
ನವಾಕ್ಷರೀ ಮಂತ್ರಜಪ,ರಾತ್ರಿ ಪೂಜೆ,ಅಷ್ಟವಧಾನ ಸೇವೆ,ಕನ್ನಿಕಾ ಅರಾಧನೆ ನಡೆಯಲಿದೆ.


ಸೆ.4 ರಂದು ಬುಧವಾರ ಬೆಳಿಗ್ಗೆ ಸಪ್ತಸತಿ ಪಾರಾಯಣ ,ಕಲಶಪೂಜೆ,ನವಗ್ರಹ ಶಾಂತಿ ಹೋಮ, ಸಾಯಂಕಾಲ 7:00 ಕ್ಕೆ ರಾತ್ರಿ ಪೂಜೆ ಅಷ್ಟಾವಧಾನ ಸೇವೆ,ಕನ್ನಿಕಾ ಅರಾಧನೆ ನಡೆಯಲಿದೆ.

LEAVE A REPLY

Please enter your comment!
Please enter your name here