ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದ ಸಂಗ್ರಹಣ ಕಚೇರಿಯ ಉದ್ಘಾಟನೆ

0

ಈಶ್ವರಮಂಗಲ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದ ಮಾಡನ್ನೂರು ಗ್ರಾಮದ, ಕಾವು ಕಾರ್ಯಕ್ಷೇತ್ರದ ನೂತನ ಹಣ ಸಂಗ್ರಹಣ ಕಚೇರಿಯು ಇಲ್ಲಿನ ಪಂಚಶ್ರೀ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು. ಮಾಲಕರಾದ ಚಿಕ್ಕಪ್ಪ ರೈ ದಂಪತಿಗಳು ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತದ ನಿರ್ದೇಶಕ ಮೋನಪ್ಪ ಪೂಜಾರಿ ಕೆರೆಮಾರು, ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತಡ್ಕ, ವಲಯ ಸಂಯೋಜಕಿ ಮಹಿತಾ ರೈ ನಡುಬೈಲು, ಸೇವದಿಕ್ಷಿತೆ ಸುಮಿತ್ರಾ ರೈ, ಪುಷ್ಪಲತ, ಪದಾಧಿಕಾರಿಗಳಾದ ಕಸ್ತೂರಿ ರೈ, ಹರಿಣಾಕ್ಷೀ, ಅವಿನಾಶ್, ಗ್ರಾಮ ವಿಕಾಸ ಯೋಜನೆಯ ಸದಸ್ಯರಾದ ಹರೀಶ್ ರೈ, ಹರೀಶ್, ಉಮೇಶ್, ಯೋಗೀಶ್, ಸವಿತಾ, ಶೋಭಾ, ಶಿಲಾವತಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here