ಕುಂಬ್ರ: ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಇದರ ಕುಂಬ್ರ ವಲಯದ 9 ಒಕ್ಕೂಟಗಳ ಅಧ್ಯಕ್ಷರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬ್ರ ವಲಯಧ್ಯಕ್ಷರಾದ ಎಸ್ ಮಾಧವ ರೈಯವರು ನೆರವೇರಿಸಿದರು. ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಹಾಗೂ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ ರವರು ತರಬೇತಿ ನೀಡಿದರು.


ಈ ತರಬೇತಿ ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಕುಮಾರಿ ಲತಾ, ಒಕ್ಕೂಟ ಅಧ್ಯಕ್ಷರುಗಳಾದ ಚಂದ್ರಾವತಿ ರೈ ಕೆದಂಬಾಡಿ, ಅಂಬಿಕಾ ರಮೇಶ್ ಕಲ್ಲರ್ಪೆ, ಲಲಿತಾ ಗೌಡ ಬೊಳ್ಳಾಡಿ, ಪ್ರೇಮ ಕುರಿಯ, ಸಂದೀಪ್ ಆರ್ಯಾಪು, ಸೀತಾರಾಮ ಪೂಜಾರಿ ತಿಂಗಳಾಡಿ ಹಾಗೂ 9 ಒಕ್ಕೂಟದ 7 ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಶಶಿಕಲಾ ರೈ ಸ್ವಾಗತಿಸಿ, ಸೇವಾಪ್ರತಿನಿಧಿ ಸವಿತಾ ಶೇಖಮಲೆ ವಂದಿಸಿದರು. ವಲಯ ಮೇಲ್ವಿಚಾರಕರಾದ ಮೋಹಿನಿ ಎಸ್ ಗೌಡರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here