ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

0

ಪುತ್ತೂರು: 2024-25ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇದರ ವತಿಯಿಂದ ಪುತ್ತೂರು ಸ್ಥಳೀಯ ಸಂಸ್ಥೆಯ ನೇತೃತ್ವದಲ್ಲಿ ನಡೆದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಸ್ಕೌಟ್ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳಾದ ಶ್ರೀಜಿತ್ ಸಿ ಹೆಚ್ (ಬೆದ್ರಾಳ ನಿವಾಸಿ ಶ್ರೀ ಗಣೇಶ್ ಭಟ್ ಸಿ ಎಚ್ ಹಾಗೂ ರವಿಕಲಾ ಕೆ ದಂಪತಿಯ ಪುತ್ರ) ಓಂಕಾರ್ ಮಯ್ಯ (ಮಿತ್ತೂರು ನಿವಾಸಿ ಶ್ರೀ ಎ ಜೆ ಶೇಖರಮಯ್ಯ ಹಾಗೂ ಲತಾಮಯ್ಯ ದಂಪತಿ ಪುತ್ರ) ಸಾರ್ಥಕ್ ಕೆ ಸಿ (ತೆಂಕಿಲ ನಿವಾಸಿ ಡಾ.ಚಂದ್ರಶೇಖರ್ ಕೆ ಹಾಗೂ ಮಮತಾ ಎ ದಂಪತಿ ಪುತ್ರ) ಪುನೀತ್ ಕೆ ಎನ್

(ಕೆದಂಬಾಡಿ ನಿವಾಸಿ ಶ್ರೀ ನೇಮಣ್ಣಗೌಡ ಹಾಗೂ ಇಂದಿರಾ ಎಸ್ ದಂಪತಿ ಪುತ್ರ) ಎಂ ಶ್ರೇಯಸ್ ವಾರಂಬಳ್ಳಿತ್ತಾಯ (ಬೆದ್ರಾಳ ನಿವಾಸಿ ಶ್ರೀ ಎಂ ಶ್ರೀನಿವಾಸ ವಾರoಬಳ್ಳಿತ್ತಾಯ ಹಾಗೂ ಎಂ ಸಂಧ್ಯಾ ವಾರಂಬಳ್ಳಿತ್ತಾಯ ದಂಪತಿ ಪುತ್ರ ) ನಿಧಿತ್ ಎಚ್ ಡಿ (ಸಾಲ್ಮರ ನಿವಾಸಿ ಶ್ರೀ ಹೆಚ್ ದಿವಾಕರ ಹಾಗೂ ನಮಿತಾ ದಂಪತಿ ಪುತ್ರ) ಕೆ ಪ್ರಮತೇಶ್ ಶರ್ಮ (ಮಿತ್ತೂರು ನಿವಾಸಿ ಶ್ರೀ ಬಿ ಬಾಲಸುಬ್ರಹ್ಮಣ್ಯ ಶರ್ಮ ಹಾಗೂ ಗೀತಾ ಲಕ್ಷ್ಮಿ ದಂಪತಿ ಪುತ್ರ) ನಿಖಿಲ್ ಗೌಡ (ಬೆಂಗಳೂರು ನಿವಾಸಿ ಶ್ರೀ ಮಂಜುನಾಥ್ ಸಿ ಹಾಗೂ ಸೌಮ್ಯ ಎನ್ ದಂಪತಿ ಪುತ್ರ) ಎಂದು ಮುಖ್ಯ ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here