ಉಪ್ಪಿನಂಗಡಿ: ಹಲ್ಲೆ ಆರೋಪ-ಮೂವರ ವಿರುದ್ಧ ದೂರು

0

ಉಪ್ಪಿನಂಗಡಿ: ಅಂಗಡಿಯೊಳಗೆ ಬರಬೇಡ ಎಂದು ಹೇಳಿದ ಕಾರಣಕ್ಕೆ ದ್ವೇಷಗೊಂಡು ಚವನ್ ಎಂಬಾತ ಜಯರಾಮ ಹಾಗೂ ಸಂದೀಪ್ ಎಂಬವರ ಜೊತೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಿರೆಬಂಡಾಡಿ ಗ್ರಾಮದ ಹರಿನಗರ ನಿವಾಸಿ ಸಂದೀಪ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಹರಿನಗರ ನಿವಾಸಿ ಸಂದೀಪ್(24ವ.)ಅವರು ಅಣ್ಣನೊಂದಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಇರುವ ಪಂಚಾಯತ್ ಕಟ್ಟಡದಲ್ಲಿ ಮಾವನ ಹೆಸರಿನಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಆ.31ರಂದು ರಾತ್ರಿ 11.00 ಗಂಟೆಗೆ ಅಂಗಡಿ ಸ್ವಚ್ಚಗೊಳಿಸುತ್ತಿರುವಾಗ ಒಳಗೆ ಬಂದ ಪರಿಚಯದ ಚವನ್ ಎಂಬಾತನನ್ನು ಒಳಗೆ ಬರಬೇಡ ಎಂದು ಹೇಳಿದ್ದರು. ಈ ದ್ವೇಷದಿಂದ ಸೆ.4ರಂದು ರಾತ್ರಿ 10.30ರ ವೇಳೆಗೆ ಚವನ್, ಜಯರಾಮ ಮತ್ತು ಸಂದೀಪ್ ಎಂಬವರನ್ನು ಕರೆದುಕೊಂಡು ಅಂಗಡಿಯ ಒಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಈ ಪೈಕಿ ಜಯಾರಾಮರವರು ಪ್ಲಾಸ್ಟಿಕ್ ಸ್ಟೂಲ್‌ನಿಂದ ಹೊಡೆದು ಸಂದೀಪ್‌ರ ಕೈ ಹಿಡಿದು ಎಳೆದು ಬೆನ್ನಿಗೆ ಗುದ್ದಿ ಪೊಲೀಸರಿಗೆ ದೂರು ನೀಡಿದಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಹರಿನಗರ ನಿವಾಸಿ ಸಂದೀಪ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ: 102/2024 ಕಲಂ: 329(4),352,118(1),115(2),351(2) ಜೊತೆಗೆ 3(5)BNS 2023ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here