ಕಂಬಳಬೆಟ್ಟು ಮಹಾಗಣೇಶೋತ್ಸವದಲ್ಲಿ ‘ನೃತ್ಯೋಹಂ’

0

ಪುತ್ತೂರು: ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಧರ್ಮನಗರ ಸಾರ್ವಜನಿಕ ಶ್ರೀಗಣೇಶೋತ್ಸನವ ಸಮಿತಿಯ 53ನೇ ವರ್ಷದ ಮಹಾಗಣೇಶೋತ್ಸವದಲ್ಲಿ ಶನಿವಾರ ಪುತ್ತೂರಿನ
ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿಗಳಿಂದ ‘ನೃತ್ಯೋಹಂ’ ಭರತನಾಟ್ಯ ಪ್ರದರ್ಶನಗೊಂಡಿತು.

ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ಅಕಾಡೆಮಿ ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರದರ್ಶಿಸಿದರು.


ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ್‌ ಧರ್ಮನಗರ, ಕಾರ್ಯದರ್ಶಿ ಧನರಾಜ್‌ ಅಮೈ, ಕೋಶಾಧಿಕಾರಿ ದಿನೇಶ್‌ ಅರ್ಕೆಚ್ಚಾರು, ಪದಾಧಿಕಾರಿಗಳು ಸೇರಿ ವಿದುಷಿ ಶಾಲಿನಿ
ಆತ್ಮಭೂಷಣ್‌ ಅವರನ್ನು ಗೌರವಿಸಿದರು. ಕಲಾವಿದರಿಗೆ ಶ್ರೀದೇವರ ಪ್ರಸಾದ,ಸ್ಮರಣಿಕೆ ನೀಡಲಾಯಿತು.

LEAVE A REPLY

Please enter your comment!
Please enter your name here