ಸೆ.16: ಆಲಂಕಾರು ವಲಯ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಸಮಾವೇಶ-ವಿವಿಧ ಕಾರ್ಯಕ್ರಮಗಳ ಆಯೋಜನೆ

0

ವಿದ್ಯಾರ್ಥಿವೇತನ ವಿತರಣೆ, ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ದಂಪತಿಗಳಿಗೆ ಗೌರವಾರ್ಪಣೆ – ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ

ಆಲಂಕಾರು: ಆಲಂಕಾರು ವಲಯ ಬಂಟರ ಸಂಘದ ಆಶ್ರಯದಲ್ಲಿ ಬಂಟರ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ, ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ದಂಪತಿಗಳಿಗೆ ಗೌರವರ್ಪಣೆ ಹಾಗೂ ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ ಸೆ.16 ರಂದು ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
’ದೀನ ದಯಾಳು’ ರೈತ ಸಭಾ ಭವನದಲ್ಲಿ ನಡೆಯಲಿದೆ.


ಸಭಾಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕೆ. ಸೇಸಪ್ಪ ರೈ ಅಧ್ಯಕ್ಷರು, ಆಲಂಕಾರು ವಲಯ ಬಂಟರ ಸಂಘ (ರಿ.) ಇದರ ಅಧ್ಯಕ್ಷರಾದ ಸೇಸಪ್ಪ ರೈ.ಕೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಹಾಗು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ರೈ,ಎನ್ ಆಲಂಕಾರು ಪ್ರಾಥಮಿಕ.ಕೃಷಿ.ಪತ್ತಿನ ಸಹಕಾರಿ ಸಂಘ ನಿ. ಆಲಂಕಾರು ಇದರ ನಿರ್ದೇಶಕರಾದ ಜೆ.ಪಿ ಶೇಷಪತಿ ರೈ, ಕೃಷಿ ಪ್ರಶಸ್ತಿ ಪುರಸ್ಕೃತರಾದ ಅಣ್ಣು ಶೆಟ್ಟಿ ಕೇವಳ ಪಟ್ಟೆ ಕುಂತೂರು ಇವರು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಬಂಟ ಬಾಂಧವರು ಭಾಗವಹಿಸುವಂತೆ ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ ಕೆ, ಉಪಾಧ್ಯಕ್ಷರಾದ ಪ್ರಭಾ ರಘುನಾಥ ಚೌಟ, ರಾಮಮೋಹನ ರೈ, ಸುರುಳಿ, ಕಾರ್ಯದರ್ಶಿ ಪ್ರಶಾಂತ ರೈ, ಮನವಳಿಕೆ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ, ಗುತ್ತುಪಾಲು ,ಜೊತೆ ಕಾರ್ಯದರ್ಶಿ
ನೀರಜ್ ಕುಮಾರ್ ರೈ, ಆರುವಾರ,ಕೋಶಾಧಿಕಾರಿ ಲೋಕನಾಥ ರೈ, ರಾಮಕುಂಜ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here