ಮುರದಲ್ಲಿ ಶುದ್ಧ ಸಸ್ಯಾಹಾರಿ ಉಪಾಹಾರ ಗೃಹ ಶ್ರೀಮಹೇಶ್ ಪ್ರಸಾದ್ ಶುಭಾರಂಭ

0

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರದಲ್ಲಿ ಶುದ್ಧ ಸಸ್ಯಾಹಾರಿ ಉಪಾಹಾರ ಗೃಹ ಶ್ರೀಮಹೇಶ್ ಪ್ರಸಾದ್ ಸೆ.15ರಂದು ಶುಭಾರಂಭಗೊಂಡಿತು.

ಗೀತಾ ರಾಜಗೋಪಾಲ್ ಭಟ್ ದೀಪ ಬೆಳಗಿಸಿ ಉಪಾಹಾರ ಗೃಹ ಉದ್ಘಾಟಿಸಿದರು. ರಾಜಗೋಪಾಲ ಭಟ್, ಕಟ್ಟಡ ಮಾಲಕ ರಾಮಚಂದ್ರ ಭಟ್, ಗಣೇಶ್‌ಪ್ರಸಾದ್ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆ, ಉಪ್ಪಿನಂಗಡಿ ಆದಿತ್ಯ ಹೊಟೇಲ್ ಮಾಲಕ ನಾರಾಯಣ ಹೇರಳೆ, ನಗರಸಭಾ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್, ನಗರಸಭಾ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ, ಮಧುರಾ ಭಟ್, ಲಕ್ಷ್ಮೀಕಿರಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹೊಟೇಲ್ ಪಾಲುದಾರ ಕೃಷ್ಣಕುಮಾರ್ ಸ್ವಾಗತಿಸಿ ಮಾತನಾಡಿ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಶುಚಿ-ರುಚಿಯಾದ ಊಟ-ಉಪಾಹಾರಗಳನ್ನು ನೀಡಲಿದ್ದೇವೆ. ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಚೈನೀಸ್, ಐಸ್‌ಕ್ರೀಂ, ಜ್ಯೂಸ್, ಚಾಟ್ಸ್ ದೊರೆಯುತ್ತದೆ. ಹವಾನಿಯಂತ್ರಿತ ವ್ಯವಸ್ಥೆ, ನೂರು ಜನರು ಏಕಕಾಲದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ, ಕ್ಯಾಟರಿಂಗ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ. ಗ್ರಾಹಕರು ಪ್ರೋತ್ಸಾಹಿಸಿ ಸಹಕರಿಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here