ನಾಗೇಶ್ ನಾಯ್ಕ್ ನರಿಮೊಗರುರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನರಿಮೊಗರು ನಿವಾಸಿ, ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತ, ಎಪಿಎಂಸಿ ಮಾಜಿ ನಿರ್ದೇಶಕ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ನಾಗೇಶ್ ನಾಯ್ಕ್ ರವರಿಗೆ ಶ್ರದ್ಧಾಂಜಲಿ ಸಭೆಯು ಸೆ.16ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.


ಹಿರಿಯ ಬಿಜೆಪಿ ಮುಖಂಡ ಮೋಹನ ರೈ ನರಿಮೊಗರು, ಹಾಗೂ ಚಂದ್ರಶೇಖರ ನಾಯ್ಕ್ ಕಂರ್ಬಡ್ಕ ನುಡಿ ನಮನ ಸಲ್ಲಿಸಿದರು.


ಮಾಜಿ ಶಾಸಕ ಸಂಜೀವ ಮಠಂದೂರು, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಲೋಕಪ್ಪ ಗೌಡ ಕೆರೆಮನೆ, ನರಿಮೊಗರು ಗ್ರಾ.ಪಂ ಉಮೇಶ್ ಇಂದಿರಾನಗರ, ಸದಸ್ಯ ನವೀನ್ ರೈ ಶಿಬರ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶೋಧ ನರಿಮೊಗರು, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ಡಿ., ಉಪಾಧ್ಯಕ್ಷೆ ಪವಿತ್ರ, ನಿರ್ದೇಶಕ ಜಯರಾಮ ಪೂಜಾರಿ ಒತ್ತೆಮುಂಡೂರು, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್, ‌ರಾಧಾಕೃಷ್ಣ ನಾಯ್ಕ್, ವೇದನಾಥ ಸುವರ್ಣ, ಮಹಾಲಿಂಗ ನಾಯ್ಕ, ತಾ.ಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಕಾರ್ಯದರ್ಶಿ ನಿತಿಶ್ ಶಾಂತಿವನ, ಮೃತ ನಾಗೇಶ್ ರವರ ಪತ್ನಿ ಆಶಾ, ಸಹೋದರರಾದ ಸಂಜೀವ ನಾಯ್ಕ್ ಸೇರಾಜೆ ಕರುಣಾಕರ ನಾಯ್ಕ್ ಸೇರಾಜೆ, ಗಂಗಾಧರ ನಾಯ್ಕ್ ಪಾಂಗಳಾಯಿ, ಪ್ರವೀಣ್ ನಾಯ್ಕ್ ಸೇರಾಜೆ ಸೇರಿದಂತೆ ಹಲವು ಮಂದಿ ಬಂಧು ಮಿತ್ರರು ಹಾಗೂ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here