ದರ್ಬೆ ಆಶೀರ್ವಾದ್ ಎಂಟರ್‌ಪ್ರೈಸಸ್ ಲಕ್ಕೀ ಸ್ಕೀಂ ಯೋಜನೆ ಡ್ರಾ

0

ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಆಯೋಜಿಸಿರುವ ಲಕ್ಕೀ ಸ್ಕೀಂ ಯೋಜನೆಯ ಏಳನೇ ಕಂತಿನ ಡ್ರಾ. ಸೆ.15ರಂದು ನಡೆಯಿತು.‌


ಆಶೀರ್ವಾದ್ ಎಂಟರ್‌ಪ್ರೈಸಸ್ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್, ರಂಗಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ಡ್ರಾ. ನಡೆಸಿಕೊಟ್ಟರು. ದಿನೇಶ್ ಕೆ. ಕಾಣಿಯೂರು(2176 ನಂಬ್ರ) ರೂ.75 ಸಾವಿರ ನಗದು ಬಂಪರ್ ಡ್ರಾ. ವಿಜೇತರಾದರು. ಅಶ್ವಥ್ ಸುವರ್ಣ(2772), ಸಮನ್ವಿ ಸಾಮೆತ್ತಡ್ಕ(1855), ಶೈನ್ ಮಾನಿ(3885), ಸುಷ್ಮಾ ಸತೀಶ್ ತೆಂಕಿಲ(3594) ಹಾಗೂ ಸಲೀಮ್ ಅಜ್ಜಿಕಟ್ಟೆ(2267)ರವರು ಚಿನ್ನದ ಉಂಗುರ ವಿಜೇತರಾಗಿ ಆಯ್ಕೆಯಾದರು. ಅಲ್ಲದೆ 50 ಮಂದಿ ಸರ್ಪ್ರೈಜ್ ಬಹುಮಾನಗಳ ವಿಜೇತರಾಗಿ ಆಯ್ಕೆಗೊಂಡರು. ಗ್ರಾಹಕರುಗಳಾದ ಅಮಿತ್ ಸುಳ್ಯ, ಸಾವಿತ್ರಿ ಜಯನಗರ, ಹುಬ್ಬಳ್ಳಿ ಟ್ರೇರ‍್ಸ್ ಮಾಲಕ ಜಯರಾಜ್ ಶೆಟ್ಟರ್ ಉಪಸ್ಥಿತರಿದ್ದರು. ಸಂಸ್ಥೆಯ ಪಾಲುದಾರರಾದ ದೇವಿಪ್ರಸಾದ್ ರಾವ್ ಮತ್ತು ಸಲ್ಮಾನ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.

ಡ್ರಾ.ವಿಜೇತರಿಗೆ ಮನೆ ಗೆಲ್ಲುವ ಅವಕಾಶ:
ಆಶೀರ್ವಾದ್ ಲಕ್ಕೀ ಸ್ಕೀಂ ಯೋಜನೆಯಲ್ಲಿ ಸದಸ್ಯರು ಪ್ರತೀ ತಿಂಗಳು ತಲಾ 1000ರೂ.ನಂತೆ ಒಟ್ಟು 20 ಕಂತುಗಳನ್ನು ತುಂಬಬೇಕಾಗುತ್ತದೆ. ಪ್ರತೀ ತಿಂಗಳ 15ರಂದು ಡ್ರಾ. ನಡೆಯಲಿದ್ದು ಡ್ರಾ. ವಿಜೇತರು ಮುಂದಿನ ಕಂತು ಪಾವತಿ ಮಾಡಬೇಕಾಗಿಲ್ಲ. ಪ್ರತೀ ತಿಂಗಳ ಡ್ರಾ.ದಲ್ಲಿ ವಿಜೇತರು ಆಕರ್ಷಕ ಬಹುಮಾನಗಳು ಗೆಲ್ಲಲು ಅವಕಾಶ ಲಭ್ಯವಿದ್ದು ಕೊನೆಯ ಮೂರು ಕಂತುಗಳ ಡ್ರಾ. ವಿಜೇತರಿಗೆ 2ಬಿಎಚ್‌ಕೆ ಮನೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡಿದೆ.

ಸಂಸ್ಥೆಯ 2ನೇ ಶಾಖೆ ಸುಳ್ಯದಲ್ಲಿ ಶುಭಾರಂಭ
ಆಶೀರ್ವಾದ್ ಎಂಟರ್‌ಪ್ರೈಸಸ್ ಸಂಸ್ಥೆಯ 2ನೇ ಶಾಖೆ ಸುಳ್ಯದ ಜ್ಯೋತಿ ಆಸ್ಪತ್ರೆಯ ಸದುರಿನ ಪ್ಲಾಟಿನಂ ಬಿಲ್ಡಿಂಗ್‌ನಲ್ಲಿ ಸೆ.15ರಂದು ಶುಭಾರಂಭಗೊಂಡಿತು. ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್, ರಂಗಭೂಮಿ ಹಾಗೂ ಚಲನಚಿತ್ರ ನಟ ರವಿ ರಾಮಕುಂಜ ನೂತನ ಶಾಖೆಯನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಸಂಸ್ಥೆಯ ಪಾಲುದಾರರಾದ ದೇವಿಪ್ರಸಾದ್ ರಾವ್ ಮತ್ತು ಸಲ್ಮಾನ್ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here