ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

0

38 ಕೋಟಿ ರೂ. ವ್ಯವಹಾರ, 11.91 ಲಕ್ಷ ರೂ. ನಿವ್ವಳ ಲಾಭ, ಶೇ. 15 ಡಿವಿಡೆಂಡ್- ಜಗನ್ನಾಥ ರೈ

ಪುತ್ತೂರು: ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 21 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಮಾತನಾಡಿ, ಬಂಟಸಿರಿ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ, 38,17,05,902 ವಾರ್ಷಿಕ ವ್ಯವಹಾರ ಮಾಡಿ, 6.12 ಕೋಟಿ ರೂ. ಸಾಲ ವಿತರಿಸಿ, 11.91 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸದಸ್ಯರುಗಳಿಗೆ ಶೇ 15 ಡಿವಿಡೆಂಡ್‌ನ್ನು ನೀಡಲಾಗುವುದು, 2025ರ ಮಾರ್ಚ್ ಅಂತ್ಯಕ್ಕೆ ರೂ 10 ಕೋಟಿಯಷ್ಟು ಠೇವಣಿ ಸಂಗ್ರಹ ಮತ್ತು 8 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.


2013ರಲ್ಲಿ ಸ್ಥಾಪನೆ:
ಪುತ್ತೂರು ತಾಲೂಕಿನಲ್ಲಿ ಬಂಟ ಸಮುದಾಯದಿಂದ 2013 ರಲ್ಲಿ ಸ್ಥಾಪಿತವಾದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ಇದೀಗ 11 ನೇ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆದು, ಸಹಕಾರ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ಕಳೆದ ವರ್ಷ 14 ಶೇಕಡಾ ಡಿವಿಡೆಂಡ್ ವಿತರಿಸಿದ ಸಂಸ್ಥೆಯು ಈ ವರ್ಷ 15 ಶೇಕಡಾ ಡಿವಿಡೆಂಡ್‌ನ್ನು ಸದಸ್ಯರುಗಳಿಗೆ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ.ಈಗಾಗಲೇ ಕಡಬ ತಾಲೂಕಿನ ಅಲಂಕಾರು, ಪುತ್ತೂರು ತಾಲೂಕಿನ ಈಶ್ವರಮಂಗಲ ಹಾಗೂ ಸುಳ್ಯ ತಾಲೂಕಿನ ನಿಂತಿಕಲ್‌ನಲ್ಲಿ ಸಂಘದ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ಮಾಡುತ್ತಿದ್ದು, ನಮ್ಮ ಎಲ್ಲಾ ಸದಸ್ಯರುಗಳು ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳು ಮತ್ತು ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಹಾಗೂ ಸಿಬ್ಬಂದಿ ವರ್ಗದ ಸಹಕಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.

ಆಡಳಿತ ಮಂಡಳಿಯ ನಿರ್ದೇಶಕ ಬೂಡಿಯಾರ್ ರಾಧಾಕೃಷ್ಣ ರೈ, ಸಂಜೀವ ಆಳ್ವ ಹಾರಾಡಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾ ಪ್ರಸಾದ್ ಆಳ್ವ, ಅನಿತಾ ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘದ ಸದಸ್ಯರುಗಳಾದ ನಿತ್ಯಾನಂದ ಶೆಟ್ಟಿ ಮನವಳಿಕೆ ಮತ್ತಿತರರು ಸಲಹೆ ಸೂಚನೆ ನೀಡಿದರು. ಸಂಸ್ಥೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ವರದಿ ವಾಚಿಸಿದರು.


ಸಂಸ್ಥೆಯ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸ್ವಾಗತಿಸಿ, ನಿರ್ದೇಶಕ ಪುರಂದರ ರೈ ಮಿತ್ರಂಪಾಡಿ ವಂದಿಸಿದರು. ನಿರ್ದೇಶಕ ವಸಂತ ಕುಮಾರ್ ರೈ ದುಗ್ಗಳ ಕಾರ್‍ಯಕ್ರಮ ನಿರೂಪಿಸಿದರು. ಎಸ್‌ಸಿಐ ಪುತ್ತೂರು ಲಿಜನ್ ಅಧ್ಯಕ್ಷೆ ಮಲ್ಲಿಕಾ ಜೆ.ರೈ ಪ್ರಾರ್ಥನೆಗೈದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರೇಮ ಎಸ್ ರೈ, ಬ್ರಿಜೇಶ್ ಶೆಟ್ಟಿ ಅಲಂಕಾರು ಶಾಖೆಯ ವ್ಯವಸ್ಥಾಪಕಿ ಸುಮತಿ ರೈ, ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕ ಸುಮಂತ್ ರೈ, ನಿಂತಿಕಲ್ ಶಾಖೆಯ ವ್ಯವಸ್ಥಾಪಕಿ ರಕ್ಷಿತಾ ರೈ, ಅಲಂಕಾರು ಶಾಖೆಯ ಗುಮಾಸ್ತ ತೇಜಸ್, ಈಶ್ವರಮಂಗಲ ಶಾಖೆಯ ಐಶ್ವರ್ಯ ರೈ ಸಹಕರಿಸಿದರು.

ಬಂಟಸಿರಿ ಅದ್ಬುತ ಸಾಧನೆ
ಬಂಟಸಿರಿ ಸಹಕಾರ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅದ್ಬುತ ಪ್ರಗತಿ ಸಾಧಿಸಿದೆ. ಸಂಸ್ಥೆಗೆ ಉತ್ತಮ ಆಡಳಿತ ಮಂಡಳಿ ಇದೆ, ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ಸಂಸ್ಥೆಯು ಮುನ್ನಡೆಯುತ್ತಿದೆ.
ನುಳಿಯಾಲು ಜಗನ್ನಾಥ ರೈ, ಅಧ್ಯಕ್ಷ

ಸಹಕಾರ ಕ್ಷೇತ್ರದಲ್ಲಿ ಸಾಧನೆ
ಸಹಕಾರ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಬಂಟಸಿರಿ ಸಹಕಾರ ಸಂಸ್ಥೆಯು ಸಹಕಾರ ತತ್ವ ಹಾಗೂ ಸಿದ್ಧಾಂತದ ಆಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಹಕಾರ ಬಂಧುಗಳ ಪೂರ್ಣ ಸಹಕಾರ ಸಂಸ್ಥೆಗೆ ದೊರೆತಿದೆ.
ದಯಾನಂದ ರೈ ಮನವಳಿಕೆಗುತ್ತು ಉಪಾಧ್ಯಕ್ಷ

ಗ್ರಾಹಕರಿಗೆ ಉತ್ತಮ ಸೇವೆ
ಬಂಟಸಿರಿ ಸಹಕಾರ ಸಂಸ್ಥೆಯಲ್ಲಿ ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಸಾಲವನ್ನು ನೀಡುತ್ತಿದ್ದೇವೆ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ.
ಸತೀಶ್ ರೈ ನಡುಬೈಲು, ಮುಖ್ಯಕಾರ್‍ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here