ಚಿನ್ನದ ಉಂಗುರ ವಾರೀಸುದಾರರಿಗೆ ಹಸ್ತಾಂತರ

0

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ಸೊಂದರಲ್ಲಿ ಪ್ರಯಾಣಿಕರೋರ್ವರು ಬಿಟ್ಟು ಹೋದ ಚಿನ್ನದ ಉಂಗುರವನ್ನು ಮರಳಿಸುವ ಮೂಲಕ ಬಸ್ಸಿನ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಕಳೆದೆರಡು ದಿನಗಳ ಹಿಂದೆ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಬರುತ್ತಿದ್ದ ಬಂಟ್ವಾಳ ಮೂಲದ ಇಕ್ಬಾಲ್ ಎಂಬವರು ಚಿನ್ನದ ಉಂಗುರವಿದ್ದ ಪೆಟ್ಟಿಗೆಯನ್ನು ಬಸ್ಸಿನಲ್ಲೇ ಬಿಟ್ಟು, ಬಸ್ಸಿನಿಂದ ಇಳಿದಿದ್ದರು. ಅವರು ಮನೆಗೆ ತೆರಳಿದಾಗ ಚಿನ್ನದ ಉಂಗುರವಿದ್ದ ಪೆಟ್ಟಿಗೆ ಬಸ್ಸಿನಲ್ಲಿ ಬಾಕಿಯಾಗಿರುವುದು ಅವರ ಗಮನಕ್ಕೆ ಬಂತು. ಬಳಿಕ ಅವರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿರುವ ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರಲ್ಲಿ ಈ ಬಗ್ಗೆ ತಿಳಿಸಿದ್ದರು. ಬಳಿಕ ಬಸ್ಸಿನ ಚಾಲಕ ಧನುಷ್ ಕೊಕ್ಕಡ ಹಾಗೂ ನಿರ್ವಾಹಕ ಗಣಪತಿ ರಾಜ್ ಅವರು ಸಂಚಾರ ನಿಯಂತ್ರಕ ಸುರೇಶ್ ಗೌಡ ಮೂಲಕ ಚಿನ್ನದ ಉಂಗುರವನ್ನು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.

LEAVE A REPLY

Please enter your comment!
Please enter your name here