ಸೆ.29ಕ್ಕೆ ಅನುರಾಗ ವಠಾರದಲ್ಲಿ ಪೂರ್ಣಚಂದ್ರ ತೇಜಸ್ವಿ ವ್ಯಕ್ತಿ-ಕೃತಿ ಅವಲೋಕನ

0

ಪುತ್ತೂರು: ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ ವ್ಯಕ್ತಿ-ಕೃತಿ ಅವಕಲೋಕನ ಕಾರ್ಯಕ್ರಮ ಸೆ.29ರಂದು ಸಂಜೆ ಗಂಟೆ 4.30ಕ್ಕೆ ಪುತ್ತೂರು ರಾಧಾಕೃಷ್ಣ ಮಂದಿರ ರಸ್ತೆಯ ಬ್ಲಡ್‌ಬ್ಕಾಂಕ್ ಬಳಿಯ ಅನುರಾಗ ವಠಾರದಲ್ಲಿ ನಡೆಯಲಿದೆ.
ಕರ್ನಾಟಕ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿರುವ ಸಾಹಿತಿ ಡಾ|ನರೇಂದ್ರ ರೈ ದೇರ್ಲ ಅವರು ತೇಜಸ್ವಿ ನುಡಿ ಚಿತ್ರಣವನ್ನು ನೀಡಲಿದ್ದಾರೆ ಎಂದು ಕರ್ನಾಟಕ ಸಂಘದ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here