ಚಾರ್ವಾಕ ಸಿಎ ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ನಿವಾಸಿ ಶೀನಪ್ಪ ಗೌಡ ನಿಧನ

0

ನೆಲ್ಯಾಡಿ: ಚಾರ್ವಾಕ ಸಿಎ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ್ಯಾಡಿ ಸಂತೆಮಾರುಕಟ್ಟೆ ಮುಂಭಾಗದಲ್ಲಿನ ಅಂಚೆ ಕಚೇರಿ ಇರುವ ವಾಣಿಜ್ಯ ಕಟ್ಟಡದ ಮಾಲಕರೂ ಆದ, ನೆಲ್ಯಾಡಿ ಗ್ರಾಮದ ಡೆಂಜ ನಿವಾಸಿ ಶೀನಪ್ಪ ಗೌಡ(73ವ.) ಅವರು ಅನಾರೋಗ್ಯದಿಂದ ಸೆ.26ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಶೀನಪ್ಪ ಗೌಡ ಅವರು ಹಲವು ವರ್ಷ ಮುದ್ವದಲ್ಲಿ ಕೇಂದ್ರ ಕಚೇರಿ ಹೊಂದಿದ್ದ ಚಾರ್ವಾಕ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಉದ್ಯೋಗದಲ್ಲಿದ್ದ ವೇಳೆ ಅವರು ಚಾರ್ವಾಕದಲ್ಲೇ ವಾಸ್ತವ್ಯವಿದ್ದರು. ನಿವೃತ್ತಿಯ ಬಳಿಕ ನೆಲ್ಯಾಡಿ ಗ್ರಾಮದ ಡೆಂಜದಲ್ಲಿ ವಾಸವಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಇದರ ಜೊತೆಗೆ ಶೀನಪ್ಪ ಗೌಡ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಜಾನಕಿ, ಪುತ್ರ ಸ್ವ ಉದ್ಯೋಗಿಯಾಗಿರುವ ಯತೀಶ್‌ಕುಮಾರ್, ಸೊಸೆ ಶಿಲ್ಪಾಯತೀಶ್, ಪುತ್ರಿಯರಾದ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಶ್ವೇತಾ, ವಿಜಯಬ್ಯಾಂಕ್‌ನ ಉದ್ಯೋಗಿ ದಿವ್ಯಶ್ರೀ, ಅಳಿಯಂದಿರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಆನಂದ, ಬೆಂಗಳೂರಿನ ಹೆಚ್‌ಎಎಲ್ ಕಂಪನಿಯ ಉದ್ಯೋಗಿ ಗಿರೀಶ್, ಮೊಮ್ಮಕ್ಕಳಾದ ರಿಧಿ, ಹರ್ಷಲ್, ರಿಷಿಕಾ, ರಿತ್ವಿಕ್, ವಿಹಾನ್, ಸಹೋದರ ಪೂವಣಿ ಗೌಡ, ಸಹೋದರಿ ಗಿರಿಜಾ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here