ಕೆದಂಬಾಡಿ ಬಿಜೆಪಿ ಬೂತ್ ಸಂಖ್ಯೆ 186 ಕ್ಕೆ ಆಯ್ಕೆ

0

ಅಧ್ಯಕ್ಷ: ನೇಮಿರಾಜ್ ರೈ, ಕಾರ್ಯದರ್ಶಿ: ರಕ್ಷಿತ್ ಗೌಡ


ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕೆದಂಬಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 186ರ ಸಭೆ ಕುಂಬ್ರ ಬಾಲಕೃಷ್ಣ ರೈ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಬೂತಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಗೌಡ ಇದ್ಯಪ್ಪೆರವರುಗಳನ್ನು ಆಯ್ಕೆ ಮಾಡಲಾಯಿತು. ಬೂತಿನ ಮತಗಟ್ಟೆ ಏಜೆಂಟ್ ಆಗಿ ಸೀತಾರಾಮ ಗೌಡ ಇದ್ಯಪ್ಪೆ ಬಿಎಲ್‌ಎ 2 ಆಗಿ ಮಹೇಶ್ ಗೌಡ ಇದ್ಯಪ್ಪೆ ಪ್ರೀತಾ ರೈ ಕುರಿಕ್ಕಾರ ಚರಣ್ ಗೌಡ ಸಾರೇಪುಣಿ ಉದಯ ಗೌಡ ಇದ್ಯಪ್ಪೆ ಯಕ್ಷಿತ್ ಗೌಡ ಇದ್ಯಪ್ಪೆ ಸಂತೋಷ್ ಕುರಿಕ್ಕಾರ ನೂತನ್ ಇದ್ಯಪ್ಪೆ ಸಚಿನ್ ಕುಂಬ್ರ ಜಗದೀಶ್ ಮಾರುತಿಪುರರವರುಗಳನ್ನು ಪದಾದಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ವಿಶೇಷ ಆಹ್ವಾನಿತರಾಗಿ ನಾರಾಯಣ ಪೂಜಾರಿ ಕುರಿಕ್ಕಾರ. ಶಿವರಾಮ ಗೌಡ ಇದ್ಯಪ್ಪೆ ಅಶ್ವಿನಿ ರೈ ಕುರಿಕ್ಕಾರ ರವೀದ್ರನಾಥ್ ರೈ ಕುರಿಕ್ಕಾರ ಸುಭಾಷ್ ರೈ ಕುರಿಕ್ಕಾರ ಚಂದ್ರ ಇದ್ಪಾಡಿ ಮಂಜುನಾಥ್ ಪೂಜಾರಿ ಇವರನ್ನು ಆಯ್ಕೆ ಮಾಡಲಾಯಿತು ಬೂತ್ ಯುವಮೋರ್ಚಾ ಸದಸ್ಯರಾಗಿ ಪ್ರಜ್ವಲ್ ಪದಡ್ಕ ಚರಣ್ ರೈ ಕುರಿಕ್ಕಾರ ಅಕ್ಷತ್ ಇದ್ಯಪ್ಪೆ ಮೋಕ್ಷಿತ್ ಇದ್ಯಪ್ಪೆ ಗಂಗಾಧರ ಇದ್ಪಾಡಿ ಲಿಖಿತ್ ಗೌಡ ಇದ್ಯಪ್ಪೆ ಶರತ್ ಇದ್ಯಪ್ಪೆ ಕಾಟ್ರಾಸ್ ಸುರೇಶ್ ಕೋಟ್ರಸ್ ಕಾರ್ತಿಕ್ ರೈ ಹರೀಶ್ ಮಾರುತಿಪುರ ಚರಣ್ ಮಾರುತಿಪುರ ಇವರನ್ನು ಹಾಗೂ ಮನ್ ಕಿ ಬಾತ್ ವೀಕ್ಷಣೆ ಪ್ರಮುಖರಾಗಿ ಸ್ವಸ್ತಿಕ್ ರಾಜ್ ರೈ ಕುಯ್ಯಾರು ಇವರನ್ನು ಆಯ್ಕೆಯಾದರು. ಸಭೆಯಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಕೆದಂಬಾಡಿ ಶಕ್ತಿ ಕೇಂದ್ರದ ಬಿಜೆಪಿ ಪ್ರಮುಖರಾದ ಶರತ್ ಗೌಡ ಗುತ್ತು ಭಾಗವಹಿಸಿದ್ದರು. ಸೀತಾರಾಮ ಗೌಡ ಇದ್ಯಪ್ಪೆ ಸ್ವಾಗತಿಸಿ, ಚಂದ್ರ ಇಡ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here