ಮಳಿ ಪ್ರದೇಶದಲ್ಲಿ ಮತ್ತೆ ಕಾಡಾನೆ- ಆತಂಕದಲ್ಲಿ ಸ್ಥಳೀಯರು

0

ಪುತ್ತೂರು:ಕಳೆದ ರಾತ್ರಿ ಆನೆಗುಂಡಿ ಕಡೆಯಿಂದ ಬಂದ ಕಾಡಾನೆ ಪೆರ್ನಾಜೆ ಮೂಲಕ ಸರ್ಜಿಮೂಲೆ ಕಾಡಿಗೆ ಲಗ್ಗೆ ಇಟ್ಟಿದ್ದು, ರಾತ್ರಿ ಹೊತ್ತು ಈಚಲು ಮರವನ್ನು ಕಿತ್ತುಹಾಕಿದೆ.ಈಚಲು ಮರ ಪಕ್ಕದಲ್ಲಿದ್ದ ವಿದ್ಯುತ್‌ ತಂತಿಗೆ ಸ್ಪರ್ಶಿಸಿ ಬೆಂಕಿ ಕಾಣಿಸಿಕೊಂಡಿದ್ದು ಭಯಬೀತಗೊಂಡ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ.

ಈ ಪರಿಸರದಲ್ಲಿ ಶ್ವೇತ ಕುಮಾರ್‌ ಮತ್ತು ಪೂವಪ್ಪ ಗೌಡ ಎಂಬವರಿಗೆ ಸೇರಿದ ಅಡಿಕೆ ತೋಟವಿದ್ದು, ರಾತ್ರಿ ವೇಳೆ ನೀರು ಕುಡಿಯುವ ಉದ್ದೇಶದಿಂದ ಕಾಡಾನೆ ಮಳಿ ಪ್ರದೇಶಕ್ಕೆ ಬರುತ್ತಿರುವುದಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ತಿಳಿಸಿದ್ದು, ಈ ಪ್ರದೇಶಕ್ಕೆ ಇನ್ನೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ದೂರಿದ್ದಾರೆ.

ಕಾಡಾನೆ ದಾಳಿಯ ಸುದ್ದಿಗಳು ಹರಡುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದ ಜನರು ಆತಂಕಗೊಂಡಿದ್ದು,ಭಯದಿಂದಲೇ ರಾತ್ರಿ ಕಳೆಯುವಂತಾಗಿದೆ.

LEAVE A REPLY

Please enter your comment!
Please enter your name here