ಏಣಿತ್ತಡ್ಕ ಅಂಗನವಾಡಿಯಲ್ಲಿ ಗಾಂಧಿ ಜಯಂತಿ-ಸ್ವಚ್ಛತಾ ಕಾರ್ಯ

0

ಕಡಬ: ಕೊಯಿಲ ಗ್ರಾಮದ ಏಣಿತ್ತಡ್ಕ(1) ಅಂಗನವಾಡಿ ಕೇಂದ್ರದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಅಂಗನವಾಡಿ ವಠಾರದಲ್ಲಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಬಾಲವಿಕಾಸ ಸಮಿತಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಪೋಷಕರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದರು. ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಸಬಳೂರು ಸ್ವಾಗತಿಸಿದರು. ಸಹಾಯಕಿ ಮೀನಾಕ್ಷಿ ನೀಡೇಲು ಸಹಕರಿಸಿದರು. ಪುಟಾಣಿಗಳಿಂದ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.

LEAVE A REPLY

Please enter your comment!
Please enter your name here