ಕೊಕ್ಕಡ: ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

0

ನೆಲ್ಯಾಡಿ: ಕರ್ನಾಟಕ ಸರಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಮಂಗಳೂರು ಕಿನ್ನಿಕಂಬಳ ರೋಸಾ ಮಿಸ್ತಿಕ ಪ.ಪೂ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಅ.3ರಂದು ಕೌಕ್ರಾಡಿ-ಕೊಕ್ಕಡ ಸಂತ ಜೋನರ ಹಿ.ಪ್ರಾ. ಶಾಲಾ ಸಭಾಭವನದಲ್ಲಿ ನಡೆಯಿತು.


ಮಂಗಳೂರು ಬೆಥನಿ ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಪಿರೇರ ಬಿ.ಎಸ್ ಅವರು ಉದ್ಘಾಟಿಸಿದರು. ಸಂತ ಜೋನರ ದೇವಾಲಯ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿಸಿಲ್ವ ಅವರು ಆಶೀರ್ವಚನ ನೀಡಿದರು. ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೆಶ್ ಬಾಣಜಾಲು ಶುಭ ಹಾರೈಸಿದರು. ಅತಿಥಿಗಳಾಗಿ ಸಂತ ಜೋನರ ಹಿ.ಪ್ರಾ. ಶಾಲೆ ಮುಖ್ಯಶಿಕ್ಷಕಿ ಜೆನೆವಿವ್ ಫೆರ್ನಾಂಡೀಸ್, ಕೊಕ್ಕಡ ಕಪಿಲ ಅಧ್ಯಕ್ಷ ಸಂತೋಷ್ ಜೈನ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್, ಕೊಕ್ಕಡ ಸಂತ ಜೋನರ ದೇವಾಲಯ ಪಾಲನಾ ಸಮಿತಿ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ, ಮಿಸ್ತಿಕ ಪ.ಪೂ ಕಾಲೇಜು ಸಂಚಾಲಕಿ ರೋಸ್ ಲೀಟಾ.ಬಿ.ಎಸ್ , ರೋಸಾ ಮಿಸ್ತಿಕಾ ಪ.ಪೂ ಕಾಲೇಜು ಪ್ರಾಚಾರ್ಯ ಡಾ.ಸಾಧನಾ ಬಿ.ಎಸ್, ಕೌಕ್ರಾಡಿ ಗ್ರಾ.ಪಂ.ಸದಸ್ಯ ಮಹೇಶ್ ಉಪಸ್ಥಿತರಿದ್ದರು.


ಡಾ.ಸಾಧನಾ ಸ್ವಾಗತಿಸಿದರು, ಸಹಶಿಬಿರಾಧಿಕಾರಿ ಆಯಮ್ಸಿಲ್ ಫೆರ್ನಾಂಡೀಸ್ ವಂದಿಸಿದರು. ಶಿಬಿರಾಧಿಕಾರಿ ಅವಿಲ್ ರೆನಿಲ್ ಡಿಸಿಲ್ವಾ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು, ಊರ ನಾಗರಿಕರು ಭಾಗವಹಿಸಿದರು. ಅ.೩ರಿಂದ ಅ.೯ರವರೆಗೆ ನಡೆಯುವ ಎನ್ ಎಸ್ ಎಸ್ ಶಿಬಿರದಲ್ಲಿ ೫೧ ಶಿಬಿರಾರ್ಥಿಗಳು ಭಾಗವಹಿಸುತ್ತಾರೆ.

LEAVE A REPLY

Please enter your comment!
Please enter your name here