ವಿಖಾಯ ಡೇ ಪ್ರಯುಕ್ತ ಸಂಜಯನಗರ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತೆ

0

ಪುತ್ತೂರು: ವಿಖಾಯ ಡೇ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ಕೂರ್ನಡ್ಕ ಶಾಖೆ ಮತ್ತು ವಿಜಿಲೆನ್ಸ್ ವಿಖಾಯ ಪುತ್ತೂರು ವಲಯ ವತಿಯಿಂದ ಸಂಜಯನಗರ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆಫ್ವಾನ್ ಅಲಿ ತಂಙಳ್ ಪ್ರಾರ್ಥನೆ ನೆರವೇರಿಸಿದರು. ನಗರಸಭಾ ಸದಸ್ಯ ಯೂಸಫ್ ಡ್ರೀಮ್ಸ್ ಉಪಸ್ಥಿತರಿದ್ದರು. ಆಕ್ಟಿವಿಂಗ್ ಸದಸ್ಯರಾದ ಮಾಜಿ ವಲಯ ವಿಖಾಯ ಕಾರ್ಯದರ್ಶಿ ಹನೀಫ್ ಮುಕ್ವೆ ಸಹಕರಿಸಿದರು.

ವಿಜಿಲೆನ್ಟ್ ವಿಖಾಯ ಇಂಚಾರ್ಜರ್ ಹನೀಫ್ ನಂದಿನಿ ದರ್ಬೆ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಕೂರ್ನಡ್ಕ ಯೂನಿಟ್ ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್ ಕೂರ್ನಡ್ಕ, ರೌಫ್ ಅಜ್ಜಿಕಟ್ಟೆ, ಆಸೀಫ್ ಕೆ ಎಂ, ಎಲ್ ಟಿ ಫಾರೂಕ್, ಸದಸ್ಯರಾದ ಅಬೂಬಕ್ಕರ್ ಇಸ್ಮಾಯಿಲ್ ಕೆನರಾ, ಫಾರೂಕ್ ಸುಲೈಮಾನ್, ಹಾಫಿಲ್ ಕೆ ಎಂ, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here