ಶಿರಾಡಿ ಘಾಟ್‌ನಲ್ಲಿ ಟ್ರಾಫಿಕ್ ಜಾಮ್

0

ಉಪ್ಪಿನಂಗಡಿ: ಶಿರಾಡಿ ಘಾಟ್ ಪ್ರದೇಶದ ಸಕಲೇಶಪುರ ಠಾಣಾ ವ್ಯಾಪ್ತಿಯ ದೋಣಿಗಲ್ ಎಂಬಲ್ಲಿನ ಕಿರಿದಾದ ರಸ್ತೆಯಲ್ಲಿ ಉಂಟಾದ ವಾಹನದ ತಾಂತ್ರಿಕ ಸಮಸ್ಯೆಯಿಂದಾಗಿ ಶುಕ್ರವಾರ ರಾತ್ರಿ ಹೆದ್ದಾರಿ ಸಂಚಾರಕ್ಕೆ ಕೆಲ ಗಂಟೆಗಳ ಕಾಲ ಅಡ್ಡಿಯುಂಟಾದ ಘಟನೆ ನಡೆದಿದೆ.


ಈ ಬಾರಿ ಮಳೆಗಾಲದಲ್ಲಿ ಮಣ್ಣು ಜರಿತಕ್ಕೊಳಗಾದ ಪ್ರದೇಶದಲ್ಲಿ ಸಂಚಾರ ಯೋಗ್ಯ ರಸ್ತೆಯು ಕಿರಿದಾಗಿದ್ದು, ಸದ್ರಿ ಸ್ಥಳದಲ್ಲಿ ಯಾವುದೇ ವಾಹನವು ತಾಂತ್ರಿಕ ದೋಷಕ್ಕೆ ತುತ್ತಾದರೆ ಪರ್ಯಾಯ ವ್ಯವಸ್ಯೆಗೆ ಆ ಭಾಗದಲ್ಲಿ ಬದಲಿ ರಸ್ತೆಗಳಿಲ್ಲದಿರುವುದರಿಂದ ಸಮಸ್ಯೆ ಬಗೆಹರಿಯುವ ವರೆಗೆ ವಾಹನಗಳು ಸಂಚರಿಸಲಾಗದೆ ಹೆದ್ದಾರಿಯಲ್ಲಿ ಉಳಿಯಬೇಕಾಗುತ್ತದೆ. ಶುಕ್ರವಾರ ರಾತ್ರಿ ಉಂಟಾಗಿದ್ದ ಅಂತಹದ್ದೇ ಸಮಸ್ಯೆಯಿಂದಾಗಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ವಾಹನಗಳ ಸಂಚಾರ ತಡೆಹಿಡಿಯಲ್ಪಟ್ಟು ಉಭಯ ದಿಕ್ಕಿನಲ್ಲೂ ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಯಿತು.

LEAVE A REPLY

Please enter your comment!
Please enter your name here