ಅ.9-10 ನಾಳೆಯಿಂದ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿವಿಧ ಗ್ರಾಮ, ವಲಯ ಭೇಟಿ ಕಾರ್ಯಕ್ರಮ

0

ಕಾಂಗ್ರೆಸ್‌ನಿಂದ ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರ ಸಮಾವೇಶ ಹಿನ್ನೆಲೆ

ಪುತ್ತೂರು: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರೊಂದಿಗೆ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳ ಮುಖಾಮುಖಿ ಸಮಾವೇಶದ ಬಗ್ಗೆ ಪ್ರಚಾರಾರ್ಥವಾಗಿ ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ವಿವಿಧ ಗ್ರಾಮ ಹಾಗೂ ವಲಯ ಭೇಟಿ ಕಾರ್ಯಕ್ರಮಗಳು ಅ.9 ಹಾಗೂ 9 10ರಂದು ನಡೆಯಲಿದೆ.

ಗ್ರಾಮ ಹಾಗೂ ವಲಯಗಳ ಭೇಟಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ಬಿ ವಿಶ್ವನಾಥ ರೈ, ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟಿ ಹಾಗೂ ರಾಜ್ಯ ವಕ್ತಾರ ಅಮಳ ರಾಮಚಂದ್ರ ಭಟ್ ಭಾಗವಹಿಸಿ ಸಮಾವೇಶದ ಕುರಿತು ಮಾಹಿತಿ ನೀಡಲಿದ್ದಾರೆ.

ಅ.9ರಂದು ಬೆಳಿಗ್ಗೆ 9 ಗಂಟೆಗೆ ಅರಿಯಡ್ಕ, ಕಾವು ಮಾಡ್ನೂರು ವಲಯದ ಕಾವು ಹೇಮನಾಥ ಶೆಟ್ಟಿಯವರ ಮನೆ, 10 ಗಂಟೆಗೆ ಕೊಳ್ತಿಗೆ ವಲಯದ ರಾಜೀವ ಗಾಂಧೀ ಸೇವಾ ಕೇಂದ್ರ, 11 ಗಂಟೆಗೆ ಬಡಗನ್ನೂರು, ಪಡುವನ್ನೂರು ವಲಯದ ಮಹಮ್ಮದ್ ಬಡಗನ್ನೂರುರವರ ಮನೆ, ಮಧ್ಯಾಹ್ನ 12 ಗಂಟೆಗೆ ನೆಟ್ಟಣಿಗೆ ಮುಡ್ನೂರು ವಲಯದ ಅನುಗ್ರಹ ವಠಾರ, ಅಪರಾಹ್ನ 2.15 ಕೆಯ್ಯೂರು ವಲಯದ ಎ.ಕೆ ಜಯರಾಮ ರೈಯವರ ಮನೆ, ಸಂಜೆ 3.15 ಸರ್ವೆ, ಮುಂಡೂರು ವಲಯದ ಸುಪ್ರೀತ್ ಕಣ್ಣಾರಾಯರ ಮನೆ ಬನೇರಿ, 4 ಗಂಟೆಗೆ ಆರ್ಯಾಪು, ಕುರಿಯ ವಲಯದ ಸಂಪ್ಯ, 5 ಗಂಟೆಗೆ ಒಳಮೊಗ್ರು, ಕೆದಂಬಾಡಿ ವಲಯದ ನಿಶ್ಮಿತಾ ಕಾಂಪ್ಲೆಕ್ಸ್ ಕುಂಬ್ರ, 6 ಗಂಟೆಗೆ ನರಿಮೊಗರು ವಲಯದ ಪುರುಷರಕಟ್ಟೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಅ.10ರಂದು ಬೆಳಿಗ್ಗೆ 10ಗಂಟೆಗೆ ನಗರ ಸಭಾ ವ್ಯಾಪ್ತಿ-ಬ್ಲಾಕ್ ಕಾಂಗ್ರೆಸ್ ಕಚೇರಿ, ಸಂಜೆ ಗಂಟೆ 3.30ಕ್ಕೆ ಪಾಣಾಜೆ ವಲಯದ ಎ.ಆರ್ ಮಂಜಿಲ್, 4.30ಕ್ಕೆ ಇರ್ದೆ ಬೆಟ್ಟಂಪಾಡಿ ವಲಯದ ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಕಚೇರಿ, 5.30ಕ್ಕೆ ನಿಡ್ಪಳ್ಳಿ ವಲಯದ ಆಶೀಪ್‌ರವರ ಮನೆಯಲ್ಲಿ ಸಭೆ ನಡೆಯಲಿದೆ. ಪಕ್ಷದ ಚುನಾಯಿತ ಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here