ಎಸ್ ಸಿ ಡಿಸಿಸಿ ಬ್ಯಾಂಕ್ ದರ್ಬೆ ಶಾಖಾ ನಿವೃತ್ತ ಅಟೆಂಡರ್ ರಾಮಣ್ಣ ನಾಯ್ಕರವರಿಗೆ ಬಂಟಸಿರಿ ಸಹಕಾರ ಸಂಘದಿಂದ ಗೌರವಾರ್ಪಣೆ

0

ಪುತ್ತೂರು:ಎಸ್ ಸಿ ಡಿಸಿಸಿ ಬ್ಯಾಂಕ್ ದರ್ಬೆ ಶಾಖೆಯಲ್ಲಿ ಅಟೆಂಡರ್ ಆಗಿ ನಿವೃತ್ತಿಗೊಂಡ ರಾಮಣ್ಣ ನಾಯ್ಕರವರಿಗೆ ಪುತ್ತೂರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದಿಂದ ಗೌರವಾರ್ಪಣೆ ನಡೆಯಿತು.

ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ರಾಮಣ್ಣ ನಾಯ್ಕರವರನ್ನು ಗೌರವಿಸಿ, ಎಸ್ ಸಿ ಡಿಸಿಸಿ ಬ್ಯಾಂಕಿನಲ್ಲಿ ಜನಸ್ನೇಹಿ ನೌಕರನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ನಿವೃತ್ತಿಗೊಂಡ ರಾಮಣ್ಣ ನಾಯ್ಕ ರವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರೇಮ ಎಸ್ ರೈ, ಬ್ರಿಜೇಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here