ಸೌದಿ ಅರೇಬಿಯಾದ ಬುರೈದಾದಲ್ಲಿ ಸಾಲ್ಮರ ದಾರುಲ್ ಹಸನಿಯಾ ಪ್ರಚಾರಾರ್ಥ ಎನ್.ಆರ್.ಐ ಮೀಟ್

0

ಪುತ್ತೂರು: ದಾರುಲ್ ಹಸನಿಯಾ ಅಕಾಡೆಮಿ ಸಾಲ್ಮರ ಇದರ ಪ್ರಚಾರಾರ್ಥ ಎನ್.ಆರ್.ಐ ಮೀಟ್ ಅ.10ರಂದು ಬುರೈದ ಶೈನ್ ರೆಸ್ಟೋರೆಂಟ್‌ನಲ್ಲಿ ನಡೆಯಿತು. ಸಯ್ಯದ್ ಕೆ.ಎಸ್ ಅಲಿ ತಂಙಳ್ ಕುಂಬೋಳ್ ದುವಾಶೀರ್ವಚನ ನೀಡಿದರು. ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅಧ್ಯಕ್ಷತೆ ವಹಿಸಿದ್ದರು.


ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸಿದರು. ದಾರುಲ್ ಹಸನಿಯಾ ಆರ್ಗನೈಸರ್ ಅನ್ವರ್ ಸ್ವಾದಿಕ್ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬಗ್ಗೆ ವಿವರಿಸಿದರು. ಅಬ್ದುಲ್ ಹಮೀದ್ ಸಾಲ್ಮರ ಹಾಗೂ ಮಹಮ್ಮದ್ ಮುಸ್ಲಿಯಾರ್ ಎಸ್.ಐ.ಸಿ, ನವಾಜ್ ಕೆ.ಎಂ.ಐ.ಸಿ ಮೊದಲಾದವರು ಸಂಸ್ಥೆಗೆ ಶುಭ ಕೋರಿದರು. ವೇದಿಕೆಯಲ್ಲಿ ಆಸಿಫ್ ಹಾಜಿ ದರ್ಬೆ, ಬಶೀರ್ ಹಾಜಿ ದರ್ಬೆ, ಇನಾಯತ್ ಅಲಿ ಬೆಂಗಳೂರು, ಕರೀಂ ಇಮ್ದಾದಿ, ಅಬ್ಬಾಸ್ ಅಲಿ ಕುಕ್ಕುವಳ್ಳಿ, ಸಯ್ಯದ್ ಸಚ್ಚಾರಿಪೇಟೆ, ಅಬ್ದುಲ್ ರಝಾಕ್ ಅಡ್ಡೂರು, ಉಮ್ಮರ್ ಮಲ್ಲೂರು, ಶಾಕಿರ್ ಬೊಳ್ಳಾಯಿ, ರವೂಪ್ ಕಳಾಯಿ ಉಪಸ್ಥಿತರಿದ್ದರು. ಝಕರಿಯ ಕೊರಿಂಗಿಲ ಸ್ವಾಗತಿಸಿದರು.

LEAVE A REPLY

Please enter your comment!
Please enter your name here