ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಹಿರಿಯ ವಿದ್ಯಾರ್ಥಿ ಸಂಘ ರಚನೆ 

0

ಅಧ್ಯಕ್ಷರಾಗಿ ಭಾಗ್ಯೇಶ್ ರೈ  ಕೆಯ್ಯೂರು, ಉಪಾಧ್ಯಕ್ಷರಾಗಿ  ಹುಸೈನಾರ್ ಸಂತೋಷ್ ನಗರ, ಪ್ರಧಾನ ಕಾರ್ಯದರ್ಶಿ ಪ್ರಮೀತ್ ರಾಜ್ ಕಟ್ಟತ್ತಾರು, ಕೋಶಾಧಿಕಾರಿ ಆನಂದ ರೈ  ದೇವಿ ನಗರ ಆಯ್ಕೆ 

ಕೆಯ್ಯೂರು: ಕೆಪಿಎಸ್ ಕೆಯ್ಯೂರಿನ ಪ್ರಾಥಮಿಕ,  ಪ್ರೌಢಶಾಲೆ,ಕಾಲೇಜು ವಿಭಾಗದ ಏಕೀಕೃತ ಹಿರಿಯ ವಿದ್ಯಾರ್ಥಿ ಸಂಘದ ರಚನೆಯ ಬಗ್ಗೆ  ಹಿರಿಯ ವಿದ್ಯಾರ್ಥಿ ಸಂಘದ ರಚನೆಯು ಕೆಪಿಎಸ್ ಕೆಯ್ಯೂರು  ಪ್ರೌಢಶಾಲಾ ಸಭಾಂಗಣದಲ್ಲಿ ಅ.13ರಂದು ನಡೆಯಿತು.

ಕೆಪಿಎಸ್ ಕೆಯ್ಯೂರು ಹಿರಿಯ ವಿದ್ಯಾರ್ಥಿ ಸಂಘದ ರಚನೆಯ ಗೌರವ ಸಲಹೆಗಾರರಾಗಿ ಕೆಪಿಎಸ್ ಕೆಯ್ಯೂರು  ಪ್ರಾಥಮಿಕ ವಿಭಾಗದ ಮುಖ್ಯ ಗುರು ಬಾಬು ಎಂ, ಪ್ರೌಢಶಾಲಾ ವಿಭಾಗ ಪ್ರಾಂಶುಪಾಲ  ವಿನೋದ್ ಕುಮಾರ್ ಕೆಎಸ್, ಕಾಲೇಜು ವಿಭಾಗದ ಪ್ರಾಂಶುಪಾಲ  ಇಸ್ಮಾಯಿಲ್ ಕೆ, ಹಾಗೂ ಕೆಪಿಎಸ್ ಕೆಯ್ಯೂರು  ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಇವರನ್ನು ನಿಯೋಜಿಸಿ, ಇವರ ಉಪಸ್ಥಿತಿಯಲ್ಲಿ ನೂತನ ಕಾರ್ಯಕಾರಿ ಸಮಿತಿ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗ್ಯೇಶ್ ರೈ ಕೆಯ್ಯೂರು, ಪ್ರಧಾನ ಕಾರ್ಯದರ್ಶಿ ಪ್ರಮಿತ್ ರಾಜ್ ಕಟ್ಟತ್ತಾರು, ಉಪಾಧ್ಯಕ್ಷರಾಗಿ ಹುಸೈನಾರ್ ಸಂತೋಷ್ ನಗರ,  ಕೋಶಾಧಿಕಾರಿಯಾಗಿ ಆನಂದ ರೈ ದೇವಿನಗರ  ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ರೈ ದೇರ್ಲ, ಹನೀಫ್ ಕೆ ಎಂ, ಜಯಂತ ಪೂಜಾರಿ ಕೆಂಗುಡೇಲು, ಗೋಪಾಲಕೃಷ್ಣ ಸಂತೋಷ್ ನಗರ,  ದಾಮೋದರ ಪೂಜಾರಿ ಕೆಂಗುಡೇಲು, ಶಕೂರ್ ಅರಿಕ್ಕಿಲ, ವಿಶ್ವೇಶ್ವರ ಭಟ್ ಪಿ, ಸಂತೋಷ್ ಕುಮಾರ್ ಸಿ. ಕೆಯ್ಯೂರು, ನಾಗರಾಜ ಶೆಟ್ಟಿ ಅಂಕತ್ತಡ್ಕ, ಭರತ್ ಕುಮಾರ್ ಎಂ ಮಾಡಾವು, ರೂಪ ರೈ ಇಳಾಂತಜೆ ಆಯ್ಕೆ ಮಾಡಲಾಯಿತು. ಕೆಪಿಎಸ್‌ ಕೆಯ್ಯೂರು ಉಪ ಪ್ರಾಂಶುಪಾಲ  ವಿನೋದ್ ಕುಮಾರ್ ಕೆ ಎಸ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೆಪಿಎಸ್‌ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು  ಬಾಬು ಎಂ ವಂದಿಸಿದರು. 

LEAVE A REPLY

Please enter your comment!
Please enter your name here