ದೇವರಗುಡ್ಡೆ ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಸೇವಾ ಟ್ರಸ್ಟ್ ನ ದೀಪಾವಳಿ ಕ್ರೀಡಾಕೂಟದ ಆಮಂತ್ರಣ ಅನಾವರಣ

0

ಕಾಣಿಯೂರು: ಬೆಳಂದೂರು ದೇವರಗುಡ್ಡೆ ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಸೇವಾ ಟ್ರಸ್ಟ್ ವತಿಯಿಂದ ನ.3ರಂದು ದೇವರಗುಡ್ಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಆರನೇ ವರ್ಷದ ದೀಪಾವಳಿ ಹಬ್ಬದ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿದಾನದಲ್ಲಿ ನೆರವೇರಿ, ಗ್ರಾಮದ ಶಿರಡಿ ದೈವದ ಸಾನಿಧ್ಯ ಕೊಯಕ್ಕುಡೆಯಲ್ಲಿ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಪ್ರಾರ್ಥನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ಟ್ರಸ್ಟ್ ಗೌರವಧ್ಯಕ್ಷರಾದ ಶ್ರೀಧರ ಗೌಡ ಕೊಯಕ್ಕುಡೆ, ಅಧ್ಯಕ್ಷರಾದ ರಾಜೇಶ್ ಗೌಡ ಬನಾರಿ, ಉಪಾಧ್ಯಕ್ಷರಾದ ವಸಂತ ಗೌಡ ಕೂಂಕ್ಯ, ಕಾರ್ಯದರ್ಶಿ ಅನಿಲ್ ಖಂಡಿಗ, ಜೊತೆ ಕಾರ್ಯದರ್ಶಿ ಆನಂದ ಕೂಂಕ್ಯ, ಹಿರಿಯರಾದ ಕೇಶವ ಗೌಡ ಕೊಯಕ್ಕುಡೆ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here