ಅರಿಯಡ್ಕದ ಪಾದಲಾಡಿಯಲ್ಲಿ ಸಿಡಿಲಿನಾಘಾತಕ್ಕೆ ಶೇಖರ ಪೂಜಾರಿಯವರ ಮನೆಗೆ ಹಾನಿ – ಸಾಕು ನಾಯಿ ಬಲಿ

0

ಪುತ್ತೂರು: ಅರಿಯಡ್ಕ ಗ್ರಾಮದ ಪಾದೆಲಾಡಿ, ಕುತ್ಯಾಡಿ ಪರಿಸರದಲ್ಲಿ ಅ.20 ರಂದು ಸಂಜೆ ಸಿಡಿಲು ಮಿಂಚಿನಿಂದ ಮನೆಯೊಂದಕ್ಕೆ ಹಾನಿಯಾಗಿದ್ದು, ಮನೆ ಸಾಕು ನಾಯಿ ಮೃತಪಟ್ಟಿದೆ.
ಅರಿಯಡ್ಕ ಗ್ರಾಮದ ಪಾದೆಲಾಡಿ ನಿವಾಸಿ ಚಂದ್ರ ಶೇಖರ ಪೂಜಾರಿ ಯವರ ಮನೆಗೆ ಸಿಡಿಲು ಮಿಂಚು ಬಡಿದ ಪರಿಣಾಮ ಮನೆಯ ವಿದ್ಯುತ್ ವಯರ್ ಸಂಪೂರ್ಣ ಸುಟ್ಟು ಹೋಗಿದೆ. ಮನೆಯ‌ ಟೈಲ್ಸ್ ಒಡೆದು ಹೋಗಿದೆ. ಕೃಷಿಗೆ ಹಾನಿಯಾಗಿದೆ.

ಇದರ ಜೊತೆಗೆ ಮನೆ ಸಾಕು ನಾಯಿ ಸಾವನ್ನಪ್ಪಿದೆ. ಮಿಂಚಿನ ಆರ್ಬಟದಿಂದ ಪಾದೆಲಾಡಿ, ಕುತ್ಯಾಡಿ ಪರಿಸರದ ವಿವಿಧ ಮನೆಗಳ ವಿದ್ಯುತ್ ಸಂಪರ್ಕ ಹಾನಿ ಗೊಂಡಿದೆ.

ಈ ಘಟನೆಯಿಂದ ಶೇಖರ ಪೂಜಾರಿಯವರಿಗೆ ಸುಮಾರು 50 ಸಾವಿರ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಲಾಗಿದೆ.

ಘಟನಾ ಸ್ಥಳಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್. ಇಕ್ಬಾಲ್ ಹುಸೈನ್ ಸಹಿತ ಅನೇಕ ಜನರು ಭೇಟಿ ನೀಡಿದರು.

LEAVE A REPLY

Please enter your comment!
Please enter your name here